ಮರೆತವರ ನೆನಪಿಗೆ
ರೇಣುಕಾ ರಮಾನಂದ
ತುಕ್ಕು
ಕಬ್ಬಿಣಕ್ಕೆ…
ಹಸಿರಿಗಲ್ಲ.
ಬಿಡದೆ
ಹೊಯ್ದ ಮಳೆಗೆ
ಒಂದು ಹುಟ್ಟಿತು
ಇನ್ನೊಂದು ಸತ್ತಿತು.
ಕಳೆದ ಕೀಲಿ ಕೈ ಸಿಕ್ಕಿದೆ
ತೆರೆಯೋಣವೆಂದರೆ
ಬೀಗಕ್ಕೆ ಬಾಯಿಲ್ಲ
ಬರೀ ಹಸಿರು.
‘ಮರೆತವರ ನೆನಪಿಗೆ
ಒಂದೆರಡು ಹಸಿರುಟ್ಟಿಸುವುದು
ನನ್ನ ಧಮ೯’
ರಸ್ತೆಯಲಿ ಸಿಕ್ಕಿ
ನಕ್ಕ ಮಳೆರಾಯ.
ಹೊರಳಿ ಹೋಗಬೇಕು
ಮರಳಿಬಾರದೆ
ಈ ಹಿಂದಿನಂತೆ
ಎಂದುಕೊಂಡೆ
ಜಗ್ಗಿ ನಿಲ್ಲಿಸಿತು
ಹಸಿರ ಮೊರೆತ.
ಹತ್ಯಾರದೊಡನೆ
ಹಾಜರಿ ಹಾಕಿದ
ಗುಜರಿ ಹುಡುಗನಿಗೂ
ಗರಗಸವಿಡಲು
ಬಿಲ್ಕುಲ್ ಇಷ್ಟವಿಲ್ಲ
‘ಈ ಮಳೆಗಾಲ ಕಳೆಯಲಿ ಸಾರ್’
ಎನ್ನುತ್ತಿದ್ದಾನೆ
‘ಹುಟ್ಟು ನಿನ್ನಿಂದಲ್ಲ ಮಳೆರಾಯನಿಂದ
ಸಾವು ಮಾತ್ರ ನಿನ್ನದು’
ಎಂದೇನಾದರೂ
ಅಪರೋಕ್ಷವಾಗಿ
ಅಂದನೇ….
ಬೀಜಗಳೇನು ಬಾನಿನುಂದುದುರಿದವೇ…
ಎಂದು ಕೇಳಿದೆ ಮೊಳಕೆಯನ್ನು…
ಹೋಗುವಾಗ ಬೀಗದ ಬಾಯಿಗೆ
ಮಣ್ಣು ತುಂಬಿದ್ದೆಯಾ
ಹೊರಳಿ ಕೇಳಿತು
ನನ್ನನ್ನೇ…
ಗೋರಿಗಳ ಮೇಲೆ
ಆಲಗಳರಳಿದ್ದು ನೋಡಿದ್ದೆ
ತುಕ್ಕೂ ಹಸಿರ ಹೆರಬಲ್ಲುದೆಂದು
ಈಗಷ್ಟೆ ತಿಳಿಯಿತು.
Chendada kavithe. Thattithu-smitha
Thank u very much
very nice. idu jadatvadinda jeevakke—-
Thank u
ಫೈನ್ ರೇಣುಕಾ,,, ಹೊಸ ಕಲ್ಪನೆ.
ಅಕ್ಕಾ ಖುಷಿ
ಆಸರೆ ಕೊಂಚ
ಸಿಕ್ಕರೆ ಸಾಕು
ನಾ ಅಲ್ಲೆ ಮೊಳೆತು
ಗಿಡವಾಗುವೆ
ನಿನ್ನ ಋಣ
ತೀರಿಸುವೆ
ನಾ ಹಾಕಿದೆ
ನೀರೆಲ್ಲ ಪೋಲಾಯಿತು
ಒಂದಿನಿತೂ ನೀ ಮರುಗದಿರು
ತಿಂಗಳ ಬಿಲ್ಲು ಬಂದಾಗ
ನಿಮ್ಮಂತೆ ನಾವಲ್ಲವೆ
ಕೆಲವು ಬಂಜರಾದರೆ
ಹಲವು ಚಿಗುರಿ
ಮೊಗ್ಗಾಗಿ ಅರಳಿ ಹೂ
ಕಾಯಿ ಹಣ್ಣು
ಕೊಟ್ಟು
ತೀರಿಸಿಬಿಡುವೆವು
ಬಿಲ್ಲು ಕಟ್ಟಿದ
ಹಣವನ್ನು
ಮಾನವಾ
ದಯವಿಟ್ಟು ನಮ್ಮ
ಸಾಯಲು ಬಿಡಬೇಡ
ತೊಳೆದ
ನೀರಾದರೂ ಸರಿ
ಬಳಿದ
ನೀರಾದರೂ ಸರಿ
ಕುಡಿದು
ಬದುಕುವೆವು
ನಾವೂ
ನಿಮ್ಮೊಂದಿಗೆ
ಕರುಣೆ ತೋರು
ಆದರೆ ನೆನಪಿರಲಿ
ನಾವೆಂದೂ
ಸ್ವಾಥಿ೯ಗಳಲ್ಲವೆ ಅಲ್ಲ
ಅದು ನಮ್ಮ
ಕನಸಲ್ಲೂ ಇಲ್ಲ
ಕಂಡಲ್ಲಿ ಹಾಕು
ಒಂದಷ್ಟು ನೀರು!
Oh…nice mam