‘ಶಿವಕುಮಾರ ಮಾವಲಿ’ಯವರ ಪತ್ತೇದಾರಿ ನಾಟಕ ‘ಸುಪಾರಿ ಕೊಲೆ’
ವಿನ್ಯಾಸ ಮತ್ತು ನಿರ್ದೇಶನ: ಚಂದ್ರ ಕೀರ್ತಿ
ರಂಗದ ಮೇಲೆ: ಅರುಣೇಶ್, ಲಕ್ಷ್ಮಿ, ಪ್ರವೀಣ್
ಬೆಳಕು ವಿನ್ಯಾಸ: ರವಿ ಶಂಕರ್
ನಾಟಕದ ಬಗ್ಗೆ:
‘ಸುಪಾರಿ ಕೊಲೆ’ಯು ಒಂದು ಪತ್ತೇದಾರಿ ಮಾದರಿಯ, ಕುತೂಹಲ ಉಳಿಸಿಕೊಂಡು ಹೋಗುವ, ಕೊಲೆಯ ಕಾರಣ ಹುಡುಕುತ್ತಾ ಸಾಗುತ್ತಲೇ ಭಾವನಾತ್ಮಕತೆಗೆ ತೆರೆದುಕೊಳ್ಳುವ ನಾಟಕ. ಯಾರು ಯಾರನ್ನು ಕೊಲ್ಲಲು ಕಾರಣಗಳೇನಿದ್ದರೂ ಕೊಲ್ಲುವವರ ಮನಸ್ಥಿತಿ ,ಕೊಲ್ಲಲು ಕಾರಣವಾದ ಸ್ಥಿತಿ ಮತ್ತು ಪರಿಣಾಮಗಳ ಬಗ್ಗೆ ಪೋಲೀಸ್ ಮನಸ್ಥಿತಿ ಹೇಗೆ ವರ್ತಿಸುತ್ತದೆ ಎಂಬುದನ್ನು ಸೂಚ್ಯವಾಗಿ ಪ್ರದರ್ಶಿಸುವ ಈ ನಾಟಕ ಸುಪಾರಿ ಕಿಲ್ಲರ್ ಒಬ್ಬನಿಗೆ ಸಿಗುವ ವಿಚಿತ್ರ ಡೀಲ್ ನಿಂದ ರೋಚಕತೆಯನ್ನು ಕಾಪಾಡಿಕೊಳ್ಳುತ್ತದೆ.
ಸುಪಾರಿ ಕಿಲ್ಲರ್ ಓರ್ವ ತಾನು ತೆಗೆದುಕೊಳ್ಳುವ ಕೊಲೆಯ ಡೀಲ್ ಗಳೊಂದಿಗೆ ಹೀಗೂ ವರ್ತಿಸಬಹುದಾ ಎಂಬ ಅನುಮಾನ,ವಿಲಕ್ಷಣತೆ ಎದುರಾಗುತ್ತಾ, ಆತ ಮುಖಾಮುಖಿಯಾಗುವ ಸನ್ನಿವೇಷ ಅವನಲ್ಲಿನ ಕೊಲೆಗಾರನನ್ನು ಪ್ರಶ್ನಿಸುತ್ತದೆ. ಹಣಕ್ಕಾಗಿ ಮಾಡುವ ಕೊಲೆಗಳ ಹಿಂದೆ ಎಂಥಾ ಕಾರಣಗಳಿರಬಹುದು ಎಂಬುದನ್ನು ಕೊಲೆಗಾರ ಗಣನೆಗೇ ತೆಗೆದುಕೊಳ್ಳಲಾರ ಎಂಬುದು ಅಲಿಖಿತ ನಿಯಮವಾದರೂ ಈ ಕತೆಯಲ್ಲಿ ಸುಪಾರಿ ತೆಗೆದುಕೊಂಡವನು ಒಂದು ಸಂಕೀರ್ಣ ಸನ್ನಿವೇಶಕ್ಕೆ ಎದುರಾದಾಗ ಮತ್ತಿನ್ನೇನೋ ಸತ್ಯಗಳು ಅನಾವರಣಗೊಳ್ಳುವುವು.
ಟಿಕೇಟ್ ದರ : ರೂ.200
ಬನ್ನಿ, ಹಂತಕನನ್ನು ಪತ್ತೆಮಾಡಿ!
0 ಪ್ರತಿಕ್ರಿಯೆಗಳು