ಕಂಡೆಯೇನು ಕನಕ..!

 ವಸುಂಧರಾ ಕದಲೂರು

ಅವನಿಲ್ಲದೆಡೆಯಿಲ್ಲೆಂದು ಬಾಳೆ ತಿನ್ನದವ ನೀನು
ಸರಳ ಬಳಿ ಕೈ ಚಾಚಿ ಬೇಡಿಕೊಂಡೆಯೇನು
ಹೇಗೆ ನಂಬುವುದಪ್ಪಾ ಇಂಥಾ ಹುನ್ನಾರಗಳನ್ನು

ಕಂಡೆಯೇನು ಕನಕ ನೀನು ಕೃಷ್ಣನನ್ನು ಕೊನೆಗೆ
ಗುಡಿಕಟ್ಟಿ ಸೆರೆ ಹಿಡಿದವರು ಬಿಟ್ಟರೇನು ನಿನಗೆ

ಬಿಲ್ಲುಬಾಣ; ಆಯುಧಗಳನು ಬಿಟ್ಟದ್ದೇಕೋ
ಕಾಯಕ ಬಿಟ್ಟು ಶರಣಾದುದು ಸಾಕೋ

ನಾಯಕ ನೀನು ದಾಸನಾದುದು ಏಕೋ
ಕೋಣನ ಮಂತ್ರ ಕಲಿತುದೂ ಸಾಕೋ

ಒಲಿದು ಬಂತೆಂದರು ಕೆರೆಯ ತೂಬಿಗೆ ಕೋಣ
ಅಡಿಯಿಡಲಾಯಿತೆ ಗುಡಿಯೊಳಗೆ ನಿನಗೆ ಅಣ್ಣಾ

ಬಂದನೇನು ಕನಕ ಅವನು ನಿನ್ನ ಆರ್ತ ಕೂಗಿಗೆ
ನೊಂದೆಯೇನು ಅವರ ಮೋಸದಾಟದ ಜೂಜಿಗೆ

ಕಂಡೆಯೇನು ಕನಕ ನೀನು ಕೃಷ್ಣನನ್ನು ಕೊನೆಗೆ
ಬಿಟ್ಟುಕೊಟ್ಟರೇನು ಅವನ ಅವರು ನಿನಗೆ?!

‍ಲೇಖಕರು nalike

July 24, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

4 ಪ್ರತಿಕ್ರಿಯೆಗಳು

  1. Allabaksha bijapur

    ವಿಡಂಬನೆಯೊಂದಿಗೆ ನಮ್ಮ ಸಮಾಜ ವ್ಯವಸ್ಥೆಗೆ ಹಿಡಿದ ಕೈಗನ್ನಡಿ ‘ಕಂಡೆ ಯೇನು ಕನಕ’.

    ಜಗದಗಲ ಮುಗಿಲಗಲ, ಎಲ್ಲೆಲ್ಲೂ ಇರುವ ಸೃಷ್ಟಿಕರ್ತನಿಗೆ ಆಲಯದಲ್ಲಿ ಕಟ್ಟಿಹಾಕಿ ಅವನ ದರ್ಶನ ಪಡೆಯುವೆವು ಎನ್ನುವ ನಮ್ಮೀ ಸಮಾಜಕ್ಕೆ ಕ್ಷಮಿಸೋ ದೇವ.

    ಅವನಿಲ್ಲದಲ್ಲಿ ಹೋಗಿ ತಿನ್ನುವೆಯಾ ಬಾಳೆ ಎಲೆ ಮರುಳೆ…,

    ಪ್ರತಿಕ್ರಿಯೆ
  2. Allabaksha bijapur

    ವಿಡಂಬನೆಯೊಂದೆಗೆ ಸಮಾಜವನ್ನು ತಿದ್ದುವ ಪದ್ಯ ‘ ಕಂಡೆಯೇನು ಕನಕ’.

    ಜಗದಗಲ ಮುಗಿಲಗಲ ಎಲ್ಲದರಲ್ಲೂ ಇರುವ ಸೃಷ್ಟಿಕರ್ತನಿಗೆ ಆಲಯ ಕಟ್ಟಿಸಿ ಕೂಡ್ರಿಸಿ, ಅವನಿಗೇ ಅಣುಕಿಸಿವಂತೆ ಇಣುಕಿ ಇಣುಕಿ ನೋಡುತ್ತಾ ದರ್ಶನ ಪಡೆದೆವಂದು ಹೇಳುವ ಈ ನಮ್ಮವರನ್ನು ಕ್ಷಮಿಸು.

    ಭಾರತಿಪುರದ ಉಪಸಂಹಾರದಲ್ಲಿಯೂ ತಿಳಿಸಿಲ್ಲವೇ……

    ಅವನಿಲ್ಲದಲ್ಲಿ ಬಾಳೆ ತಿನ್ನಲಾಗದೇ ಮರಳಿದ ನಾಯಕ, ದಾಸ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: