ಒಂದು ಜಿಪಿಎಸ್ ಕವಿತೆ…

ಸದಾಶಿವ್ ಸೊರಟೂರು

ಊರಿಗೆ ದಾರಿ
ಯಾರು ತೋರಿದರೇನು?
ಎನ್ನುವ
ಜಿಪಿಎಸ್ ನಂತಹ ಮಾತಿನಲ್ಲಿ
ನನಗೆ ಆಸಕ್ತಿಯಿಲ್ಲ

ದಾರಿ ತೋರಿ ಹೋದವನ
ಆ ದಾರಿಯಲಿ
ಬಹಳಮಾಡಿ ಏನುಂಟು?
ಗರಿಕೆಯೇ ಇಲ್ಲದ ಮಣ್ಣು ನೆಲ
ಇಲ್ಲವೇ ಡಾಮರು ರಸ್ತೆ
ಪಕ್ಕಕ್ಕೆ ಸವರಿದ ಬೇಲಿ ಸಾಲುಗಳು

ಊರು ಸೇರಬಹುದಷ್ಟೆ
ಆದರೆ
ಊರು ಸೇರುವುದೊಂದೇ
ಬದುಕಲ್ಲ!

ಕುದುರೆಯೂ ಸಾಗುತ್ತದೆ
ಕಣ್ಣುಕಟ್ಟಿಕೊಂಡು
ಸಾಗುವ ಸಿದ್ದ ದಾರಿಯೊಂದಿದ್ದರೆ

ಜಿಪಿಎಸ್ ನ ಹುಡುಗಿ
ದಾರಿಯಲಿ ನೀನು ಕಳೆದು
ಹೋಗಬೇಕೆಂದರೂ ಬಿಡುವುದಿಲ್ಲ

ಯಾರೊ ತೋರಿದ ಹಾದಿಯನು
ನೀನಾಗಿಯೇ ತಪ್ಪುವ ಧೈರ್ಯವೂ
ಮಾಡುವುದಿಲ್ಲ!

ಅತ್ತ ಆ ತುದಿಯಲಿ
ಏನಿದೆ ಎಂದು ಸ್ವತಃ ದಾರಿಗೂ
ತಿಳಿಯದ
ಯಾರೂ ತೋರದ ಹಾದಿಯಲಿ
ಪಾದಗಳನೊಮ್ಮೆ
ಊರಿ ನೋಡು

ಹೆಜ್ಜೆ-ಹಜ್ಜೆಗೂ ಒಲವು
ನಿಗೂಢ ನಾಳೆಗಳಂತ
ಚೆಲುವು!

ಸೇರುವುದಷ್ಟೇ ಗುರಿಯಲ್ಲ
ಸೇರುತ್ತಿರುವುದು ಗುರಿಯೇ!

‍ಲೇಖಕರು Admin

November 12, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. prathibha nandakumar

    ಸದಾಶಿವ ಸೊರಟೂರ್ ಒಳ್ಳೆಯ ಕವನಗಳನ್ನು ಬರೆಯುತ್ತಿದ್ದಾರೆ

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: