ಏಳು ಮರಗಳ transplantation ಕಥೆಯು..

ಮಂಜುನಾಥ್ ಚಾಂದ್
ಇಲ್ಲಿರುವ ಇಬ್ಬರು ಹುಡುಗರ ಹೆಸರು ಚಿರಂಜನ್ ಕುಮಾರ್ ಮತ್ತು ಕೌಸ್ತುಭ್ ಹೆಬ್ಳೀಕರ್. ಇಬ್ಬರೂ ಬೆಂಗಳೂರಿನ ಬಸವನಗುಡಿಯ ಬಿಎಂಎಸ್ ಕಾಲೇಜಿನ ಎಂಜಿನಿಯರಿಂಗ್ ವಿದ್ಯಾರ್ಥಿಗಳು.

ಇವರ ಕಾಲೇಜಿನ ಪಾಸಲೆಯಲ್ಲಿರುವ ಏಳು ಬೃಹತ್ ಮರಗಳನ್ನು ತೆಗೆಯಬೇಕಾದ ಅನಿವಾರ್ಯ ಪ್ರಸಂಗ ಬಂದಾಗ ಈ ಹುಡುಗರು ಮಾಡಿದ ಯೋಚನೆ ಮರಗಳ ಸ್ಥಳಾಂತರ. ಏಳೂ ಮರಗಳನ್ನು ಅತ್ಯಂತ ಜೋಪಾನದಿಂದ ಬುಡದ ಮಣ್ಣು, ಬೇರಿನ ಸಮೇತ ಕ್ರೇನ್ ಮೂಲಕ ಮೇಲಕ್ಕೆತ್ತಿದ್ದಾರೆ. ಮುಂದೆ ಅಷ್ಟೂ ಮರಗಳನ್ನು ಕ್ರೇನ್ ಮೂಲಕವೇ ಹತ್ತು ಕಿ.ಮೀ. ಹೆಚ್ಚು ದೂರದ ಬನಶಂಕರಿ ಆರನೇ ಹಂತದ ಬಿಡಿಎ ಬಡಾವಣೆಯ ಮೊದಲ ಬ್ಲಾಕ್‌ನಲ್ಲಿರುವ ಶಿಲ್ಪೋದ್ಯಾನಕ್ಕೆ ಸ್ಥಳಾಂತರಿಸಿದ್ದಾರೆ. ಇಲ್ಲಿಯೂ ಮರಗಳಿಗೆ ಲಗತ್ತಾದ ಅಗಲದ ಗುಂಡಿಗಳನ್ನು ತೋಡಿ ಮರಗಳ ಮರುಸ್ಥಾಪನೆ ಮಾಡುವಲ್ಲಿ ಸಫಲರಾಗಿದ್ದಾರೆ. ಇಬ್ಬರ ಮುಖದಲ್ಲಿ ಸಂತೃಪ್ತ ಭಾವ…

 

ಇದಾಗಿ ತಿಂಗಳು ಕಳೆದಿದೆ.

ಮರ ನೆಟ್ಟರೆ ಸಾಕೇ? ನೀರು ಹಾಕಿ ಪೋಷಿಸಬೇಕಲ್ಲ? ಈ ಹುಡುಗರು ಬಸವನಗುಡಿಯಿಂದ ವಾರಕ್ಕೆ ಎರಡು ಮೂರು ಬಾರಿ ಬೆಳಗಾತವೇ ಬಂದು ನೀರುಣಿಸುತ್ತಾರೆ. ಮಕ್ಕಳಿಗಿಂತ ಪ್ರೀತಿಯಿಂದ ಕಾಣುತ್ತಾರೆ.
ಈಗ ಈ ಮರಗಳು ಭೂಮ್ತಾಯಿ ಮಡಿಲಿಗೆ ಬೇರುಗಳನ್ನು ಇಳಿಸುತ್ತಿವೆ. ಎರಡು ಗಸಗಸೆ ಮರಗಳು ಆಗಲೇ ಚಿಗುರೊಡೆದಿವೆ. ಮಕ್ಕಳಿಬ್ಬರ ಕಣ್ಣಲ್ಲಿ ಎಂಥ ಖುಷಿ ಅಂತೀರಿ?
ನಮ್ಮ ಈ ಯುವ ತಲೆಮಾರು ಹಾದಿ ತಪ್ಪುತ್ತಿವೆ ಎಂಬುದು ಸುಳ್ಳೇ ಸುಳ್ಳು. ಇವರೇ ನಮ್ಮ ನಿಜದ ಕಣ್ಮಣಿಗಳು. ಈ ಏಳೂ ಮರಗಳು ನಮ್ಮ ಬಡಾವಣೆಯ ಜೀವದುಸಿರು. ಅವನ್ನು ನೀರುಣಿಸಿ ಬೆಳೆಸಲು ನಮ್ಮ ಬಡಾವಣೆಯ ನಿವಾಸಿಗಳೂ ಈಗ ಸಂಕಲ್ಪ ತೊಟ್ಟಿದ್ದೇವೆ…
ಇಷ್ಟಕ್ಕೆಲ್ಲ ಈ ಹುಡುಗರು ಖರ್ಚು ಮಾಡಿದ ದುಡ್ಡು ಎಷ್ಟಂತೀರಿ?
ಒಂದು ಲಕ್ಷಕ್ಕೂ ಅಧಿಕ…!!

ಈ ಹುಡುಗರು ನಿಜಕ್ಕೂ ಅಭಿನಂದನಾರ್ಹರಲ್ಲವೇ?

‍ಲೇಖಕರು avadhi

March 13, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

  1. T S SHRAVANA KUMARI

    ಸಾರ್ಥಕವಾದ ಕೆಲಸ, ಇತರರಿಗೆ ಮಾದರಿಯಾಗಲಿ.

    ಪ್ರತಿಕ್ರಿಯೆ
  2. Shyamala Madhav

    ಸ್ತುತ್ಯರ್ಹ! ಇತರರೂ ಅನುಸರಿಸುವಂತಾಗಲಿ!

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: