ಮಹಮದ್ ರಫೀಕ್
ಕೆಲದಿನಗಳ ಹಿಂದೆ ನನ್ನ ಗೆಳೆಯನ ಆಹ್ವಾನದ ಮೇರೆಗೆ ಅವರ ಹಬ್ಬದ ಸಲುವಾಗಿ ತಮಿಳಿನಾಡಿಗೆ ಹೋಗಿದ್ದೆ.
69 ಜಾತಿ ಸೇರಿ ಬದುಕುವ ಒಂದು ಊರು, ಅಲ್ಲಿ ಮೇಲು ಕೀಳಿಲ್ಲ ಗುಡಿಸಲುಗಳೇ ಅವರ ಸೂರು.
ಊರಿನೊಳಗೆ ವಾಹನಗಳ ಪ್ರವೇಶ ನಿಷೇದ , ಮಾಂಸ , ಮಧ್ಯಪಾನ ನಿಷೇದ , ಸುಳ್ಳು , ಮೋಸ, ವ್ಯಭಿಚಾರ ಮಾಡುವುಹಾಗಿಲ್ಲ.
ಅತೀ ಶಿಸ್ತಿನಿಂದ ಅಳವಡಿಸಿಕೊಂಡಿರುವ ಇನ್ನು ಅನೇಕ ಪದ್ಧತಿಗಳು .
ಹೊರಗಿನ ಯಾವುದೇ ವ್ಯಕ್ತಿ ಊರಿನೊಳಗೆ ಪ್ರವೇಶಿಸಿದ್ದೆ ಆದಲ್ಲಿ ಅವರಿಗೂ ಇದೆ ನಿಯಮ.
ಅಲ್ಲಿ ದೇಶದ ವಿಭಿನ್ನ ಪ್ರದೇಶಗಳಿಂದ ಬರುವ ಆ ಸಮುದಾಯದ ಜನ ಒಟ್ಟಾಗಿ ಸೇರಿ ಒಬ್ಬನೇ ಭಗವಂತ ಮತ್ತು ಮಾನವರೆಲ್ಲ ಒಂದೇ ಎನ್ನುವ ನಂಬಿಕೆಯೊಂದಿಗೆ ಪ್ರಾರ್ಥನೆ ಸಲ್ಲಿಸುತ್ತಾರೆ .
ಬಿಳಿ ಪಂಚೆ , ಬಿಳಿ ಶರ್ಟು ಮತ್ತು ಬಿಳಿ ಪೇಟ ಇದು ಅಲ್ಲಿನ ನಿಯಮ ..
ಅಗತ್ಯವಾದ ಮಾತುಗಳು ಬಿಟ್ಟರೆ ಮೌನವೇ ಹೆಚ್ಚು.
ಮರುಳಿನಿಂದ ಕೂಡಿರುವ ನೆಲದ ಮೇಲೆ ಕುಳಿತುಕೊಳ್ಳುವ ವ್ಯವಸ್ಥೆ .
ಸಣ್ಣ ಪುಟ್ಟ ಕಸುಬು ಮಾಡಿಕೊಂಡು ಬದುಕುವ ದಿನಗೂಲಿ ವ್ಯಕ್ತಿಗೂ ಲಂಡನಲ್ಲಿ ಅಧಿಕಾರಿಯಾಗಿದ್ದ ವ್ಯಕ್ತಿಗೂ ಒಂದೇ ಗೌರವ .
ಪ್ರತಿಯೊಬ್ಬರ ಮಾತಿನಲ್ಲೂ ಪ್ರೀತಿ ಮತ್ತು ತಾಳ್ಮೆ .
ಎಲ್ಲರದು ನಗುಮುಖ ಅಪರಿಚಿತನನ್ನು ಬಾಲ್ಯದ ಗೆಳೆಯನೆಬಂತೆ ಮಾತನಾಡಿಸುವ ವಿಧಾನ.
ಆ ಪ್ರದೇಶದ ತುಂಬೆಲ್ಲಾ ಬೇವಿನ ಮರ , ಅರಳೀ ಮರ ಮತ್ತು ಎಲ್ಲರೊಂದಿಗೆ ಭಯವಿಲ್ಲದೆ ನಡೆದಾಡುತ್ತಿದ್ದ ನವಿಲುಗಳು ..!
ಇದು ತಿರುಚಿಯಲ್ಲಿನ ಒಂದು ಸಣ್ಣ ಊರು ..!
ಮುಸ್ಲಿಂ ಸಂತನೊಬ್ಬನ ಅನುಯಾಯಿಗಳು ಇವರೆಲ್ಲ ..
ಮುಂಬೈ ಇಂದ ಹಿಡಿದು ಕೇರಳದ ಹಳ್ಳಿಯವರೆಗೂ ವಿವಿಧ ಭಾಗದಿಂದ ಬಂದಂತಹ ಸತ್ಯಾನ್ವೇಷಕರು ಕಂಡರು .
ವೇದ, ಕುರಾನ್ , ಗೀತೆ, ಬೈಬಲ್ ನ ಚರ್ಚೆಗಳು ಅಲ್ಲಿ ಸರ್ವೇಸಾಮಾನ್ಯ .
ಊರಿನ ತುಂಬೆಲ್ಲಾ ಸತ್ಯಾನ್ವೇಷಣೆಯ ಚರ್ಚೆಗಳೇ ..!!
ಆ ಸಮುದಾಯದ ಗೆಳಯ ಸಾಲೈ ಅಂಕೇಶನ ಆಹ್ವಾನದ ಮೇರೆಗೆ ಎರಡು ದಿನ ಆ ಅದ್ಭುತವನೆಲ್ಲ ಸವಿದು ಬಂದೆ ..!!
ಬ್ರಹ್ಮೋದಯ ಮೆಇವಾಜ್ಹಿ ಸಾಲೈ ಆಂಡವರಿನ್ ತಿರುವಾದಿಗಲೆ ಶರಣಂ
ನನ್ನ ಭಾರತ ಈ ರೀತಿ ಒಂದಾಗಿ ಕೂಡಿ ಬಾಳಿದರೆ ಎಷ್ಟು ಚೆಂದ ..!!!
~ ಹಗಲುಗನಸುಗಾರ
ಆಶ್ಚರ್ಯ, ಸಂತೋಷ ಬರಹ ಓದಿ.
ನನ್ನ ಭಾರತ ಈ ರೀತಿ ಒಂದಾಗಿ ಕೂಡಿ ಬಾಳಿದರೆ ಎಷ್ಟು ಚೆಂದ ..!!!
Koodi baaluva swargada hesare illa !!!
It is a surprise that these villagers have adopted Gandhian concepts of Utopia and yet survive!
Aí¥Ü¨æãªí¨Üá FÃÜá CÃÜÆá DX®Ü Cíw¿Þ¨ÜÈÉ ÓÝ«ÜÂÊæà. ÖÝX¨ÜªÃæ WæÅàp… !
àa oorina hesarenu…???
Entaha Geleyara oorige shubhavagali hageye evara bhavaikateyu, edi namma
bharatada uddavgalakku haradali endu preeti enda haraisuve ..Dhanyavadagalu