ಎನ್ ಆರ್ ವಿಶುಕುಮಾರ್
ನನ್ನ ನಿನ್ನ ಭೇಟಿ
ಒಂದೆರಡು ಸಲ ಅಷ್ಟೇ
ನನ್ನ ನಿನ್ನ ನಡುವೆ
ಒಮ್ಮೆ ಕೂಡಾ
ಕಣ್ಣು ಕಣ್ಣು ಕೂಡಲಿಲ್ಲ
ಮನ ಬೆರೆಯಲಿಲ್ಲ
ಆದರೂ ಆ ದಿನ
ನಿನ್ನ ನಿಧನದ ಸುದ್ದಿ
ಕಿವಿಗೆ ಬಿದ್ದ ದಿನ
ನನ್ನ ಮನದಲ್ಲಿ
ಎಂಥ ನೋವು
ಎಂಥ ದುಗುಡ
ದುಃಖ ಒತ್ತರಿಸಿ
ಕಣ್ಣಂಚಿನಲಿ ನಿನ್ನ
ನೆನಪಿನ ಕಣ್ಣೀರು
ಧಾರೆ ಧಾರೆ …
ಏನೀ ಭಾವತಂತು
ಏನೀ ಜೀವತಂತು
ಮಿಡಿಯಿತು
ನನ್ನ ನಿನ್ನ ನಡುವೆ
ಅಂತರಂಗದ ಗೆಳೆತನ
ಅಂದರೆ ಇದೇನಾ ?
ಏಸು ಕನಸುಗಳು
ನಿನ್ನ ಚಿತ್ತ ಬಿತ್ತಿಯಲಿ
ಏಸು ಗೆಳೆಯರು
ನಿನ್ನ ಅಂತರಂಗದಲಿ
ಏಸು ಸಂಗಾತಿಗಳು
ನಿನ್ನ ಜೊತೆಯಲಿ
ಎಲ್ಲರ ಎದೆಯಲ್ಲೂ
ಒಂದೇ ಭಾವ
ಒಂದೇ ಜೀವ
ನಮ್ಮ ವಿಠಲ ….
0 ಪ್ರತಿಕ್ರಿಯೆಗಳು