ಎಕನಾಮಿಕ್ಸ್ ಪುಸ್ತಕದ ಪುಟವೊಂದು ತೆಗೆದಿದ್ದೇ ತಡ..

m s krishnamurthy geetha

ಎಂ ಎಸ್ ಕೃಷ್ಣಮೂರ್ತಿ ಗೀತಾ 

ಬೆಳಗ್ಗೆ ಪ್ರೊಫೆಸರ್ ಪೋನ್ ಮಾಡಿದ್ದರು
ಅವರ ರಾಜ್ಯಶಾಸ್ತ್ರದ ಪುಸ್ತಕ
ಕಪಾಟಿನಿಂದಾಚೆ ಬಂದು ಕುಣಿಯುತ್ತಿದೆಯಂತೆ
ಆಜಾದಿ
ಆಜಾದಿ ಎಂದು ಕೂಗಾಡುತ್ತಾ

ನಾನು ಹೇಗಾದರಾಗಲಿ ಎಂದು ನನ್ನ
ಎಕನಾಮಿಕ್ಸ್ ಪುಸ್ತಕದ ಪುಟವೊಂದು ತೆಗೆದಿದ್ದೇ ತಡ
ಅದು ಕುಣಿಯುತ್ತಾ
ಆಜಾದಿ
ಅಜಾದಿ ಎಂದಿತು

ನಾನು ಬಡತನದಿಂದ ಎಂದೆ
ಅಜಾದಿ ಎಂದು ಕೂಗಿತು

ನಾನು ಅಸಮಾನತೆಯಿಂದ ಎಂದೆ
ಅಜಾದಿ ಎಂದು ಕೂಗಿತು

ನಾನು ಖೊಟ್ಟಿ ಆರ್ಥಿಕ ನೀತಿಯಿಂದ ಎಂದೆ
ಅಜಾದಿ ಎಂದು ಕೂಗಿತು

ನಾನು ಹಸಿವಿನಿಂದ ಎಂದೆ
ಅಜಾದಿ ಅಜಾದಿ ಅಜಾದಿ ಎಂದು ಕೂಗಿತು

ನೋಡಿ ನಿಮ್ಮ ಮನೆಯ
ಸಮಾಜಶಾಸ್ತ್ರದ ಪುಸ್ತಕಗಳೂ ಕುಣಿಯುತ್ತಿರಬಹುದು

ಅಜಾದಿ ಅಜಾದಿ ಆಜಾದಿ ಎಂದು ಘೋಷಣೆಯನ್ನು ಕೂಗುತ್ತಾ……

 

11333736_390179137850358_779330327_n

keep distance

ಸೈಕಲ್ ಮೇಲೆ
ಎಳನೀರು ಹೇರಿಕೊಂಡು ಮಾರುತ್ತಿರುವವನಿಗೆ
ಏನೋ ಖುಷಿ…

ಸೈಕಲ್ ಹಿಂದೆ
keep distance ಅಂತ
ಬೋರ್ಡ್ ತಗಲಿಸಿದ್ದ

ಪೋಲಿಸಪ್ಪ ಬೆತ್ತದಿಂದ ಬೋರ್ಡಿಗೆ ಬಡಿದು
ಇದು ಬಾರಿ ವಾಹನದ ಹಿಂದೆ ಇರಬೇಕಾದ್ದು
ನೀನು.. ನಿನ್ನ ಸೈಕಲ್ ಈ ರಸ್ತೆ ಮೇಲೇ ಓಡಾಡೋ
ತೀರ ಸಾಮಾನ್ಯ
ಪ್ರಯಾಣಿಕ ಕ್ರಿಮಿಗಳು
ನಿನಗ್ಯಾಕಲೋ ಈ ಬೋರ್ಡು ಎಂದು
ನಗಾಡಿದ

ಎಳನೀರಿನವನು ನಕ್ಕು ಪೋಲಿಸಪ್ಪನಿಗೆ
ಬಿಟ್ಟಿ ಎಳನೀರು ಕೊಚ್ಚಿ
ಕೊಟ್ಟ

‍ಲೇಖಕರು admin

March 26, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: