ಎಂ ಎಸ್ ಕೃಷ್ಣಮೂರ್ತಿ ಗೀತಾ
ಬೆಳಗ್ಗೆ ಪ್ರೊಫೆಸರ್ ಪೋನ್ ಮಾಡಿದ್ದರು
ಅವರ ರಾಜ್ಯಶಾಸ್ತ್ರದ ಪುಸ್ತಕ
ಕಪಾಟಿನಿಂದಾಚೆ ಬಂದು ಕುಣಿಯುತ್ತಿದೆಯಂತೆ
ಆಜಾದಿ
ಆಜಾದಿ ಎಂದು ಕೂಗಾಡುತ್ತಾ
ನಾನು ಹೇಗಾದರಾಗಲಿ ಎಂದು ನನ್ನ
ಎಕನಾಮಿಕ್ಸ್ ಪುಸ್ತಕದ ಪುಟವೊಂದು ತೆಗೆದಿದ್ದೇ ತಡ
ಅದು ಕುಣಿಯುತ್ತಾ
ಆಜಾದಿ
ಅಜಾದಿ ಎಂದಿತು
ನಾನು ಬಡತನದಿಂದ ಎಂದೆ
ಅಜಾದಿ ಎಂದು ಕೂಗಿತು
ನಾನು ಅಸಮಾನತೆಯಿಂದ ಎಂದೆ
ಅಜಾದಿ ಎಂದು ಕೂಗಿತು
ನಾನು ಖೊಟ್ಟಿ ಆರ್ಥಿಕ ನೀತಿಯಿಂದ ಎಂದೆ
ಅಜಾದಿ ಎಂದು ಕೂಗಿತು
ನಾನು ಹಸಿವಿನಿಂದ ಎಂದೆ
ಅಜಾದಿ ಅಜಾದಿ ಅಜಾದಿ ಎಂದು ಕೂಗಿತು
ನೋಡಿ ನಿಮ್ಮ ಮನೆಯ
ಸಮಾಜಶಾಸ್ತ್ರದ ಪುಸ್ತಕಗಳೂ ಕುಣಿಯುತ್ತಿರಬಹುದು
ಅಜಾದಿ ಅಜಾದಿ ಆಜಾದಿ ಎಂದು ಘೋಷಣೆಯನ್ನು ಕೂಗುತ್ತಾ……
keep distance
ಸೈಕಲ್ ಮೇಲೆ
ಎಳನೀರು ಹೇರಿಕೊಂಡು ಮಾರುತ್ತಿರುವವನಿಗೆ
ಏನೋ ಖುಷಿ…
ಸೈಕಲ್ ಹಿಂದೆ
keep distance ಅಂತ
ಬೋರ್ಡ್ ತಗಲಿಸಿದ್ದ
ಪೋಲಿಸಪ್ಪ ಬೆತ್ತದಿಂದ ಬೋರ್ಡಿಗೆ ಬಡಿದು
ಇದು ಬಾರಿ ವಾಹನದ ಹಿಂದೆ ಇರಬೇಕಾದ್ದು
ನೀನು.. ನಿನ್ನ ಸೈಕಲ್ ಈ ರಸ್ತೆ ಮೇಲೇ ಓಡಾಡೋ
ತೀರ ಸಾಮಾನ್ಯ
ಪ್ರಯಾಣಿಕ ಕ್ರಿಮಿಗಳು
ನಿನಗ್ಯಾಕಲೋ ಈ ಬೋರ್ಡು ಎಂದು
ನಗಾಡಿದ
ಎಳನೀರಿನವನು ನಕ್ಕು ಪೋಲಿಸಪ್ಪನಿಗೆ
ಬಿಟ್ಟಿ ಎಳನೀರು ಕೊಚ್ಚಿ
ಕೊಟ್ಟ
ಆಜಾದಿ ಕವನ ಚೆನ್ನಾಗಿದೆ.
ಮನಮುಟ್ಟುವ ಕವಿತೆ