ಉದಯಕುಮಾರ ಹಬ್ಬು ಕವಿತೆ- ನನ್ನವಳು ಅತ್ತಾಗ…

ಉದಯಕುಮಾರ ಹಬ್ಬು

ನನ್ನವಳು ಅತ್ತಾಗ
ಜಂಘಾಬಲವೆ ಉಡುಗುವುದು
ಕಂಗಾಲಾಗಿ ಅತ್ತಿತ್ತ ಓಡಾಡುವೆ
ಪಂಜರದೊಳಗಣ ಇಲಿ
ಅಪ್ಪಿಕೊಳ್ಳ ಹೋದರೆ ಕೊಸರಿಕೊಳ್ಳುವಳು
ತಲೆಯನು ಕೈಮುಷ್ಟಿಯಲಿಟ್ಟು
ನಾ ನುಲಿವೆನು.

ಆಷಾಡದ ದಿನಗಳಲಿ
ಗಗನ ಘರ್ಜಿಸುವಾಗ
ಗುಡುಗು ಸಿಡಿಲುಗಳ ಖದೋಣಿ
ಧಡಧಡನೆ ಬಡಿವಾಗ ಎದೆಗೆ
ಇವಳು ನನ್ನ ಮೈಬಳ್ಳಿಯಾಗುವಳು
ನಾನಪ್ಪಿ‌ ಸಂತೈಸಿ ಮಗುವಿನಂತಾಗೆ
ನನ್ನ ಮನವೂ ಒದ್ದಾಡುವುದು
ಮುಂಗುಸಿಯ ಎದುರಿನಲಿ ಹಾವಿನಂತೆ

ಅವಳ ಅಳುವಿಗೆ ನಾನೆ ಕಾರಣವಾಗೆ
ಪಶ್ಚಾತ್ತಾಪ ದಳ್ಳುರಿ‌ ತನುಮನವ ಉರಿಸುವಾಗ್ಗೆ
ಕೈಮುಗಿದು ಕಾಲ್ಹಿಡಿದು
ಎಲ್ಲ ಮರೆತುಬಿಡು ಚಿನ್ನಾ ಎನ್ನುವಾಗ್ಗೆ
ಗುಡುಗು ಸಿಡಿಲಿನ ನಂತರ
ಮಳೆಯ ತಂಪ್ಹನಿ ಸಿಂಪಡಿಸಿ
ಪಾರಿಜಾತದ ಪರಿಮಳವು
ಮನೆ ತುಂಬ ಹರಡುವುದು.

ಈಗ ಅಳುವುದು ಕಡಿಮೆ
ನಾ ಅಳಿಸುವುದೂ ಕಡಿಮೆ
ನಾನು ಅವಳ ರಾಜ್ಯದ ಸಾಮಂತ
ಕಪ್ಪ ಕಾಣಿಕೆಗಳಿಗೇನೂ ಕಡಿಮೆ ಇಲ್ಲ
ಪ್ತೀತಿ ಅಂದರೆ ಇಷ್ಟೇನಾ?
ಎಂದು ಕೇಳುವಳು
ಇದನು ಎಲ್ಲ ಗಂಡದಿಂರೂ ಮಾಡುವರು
ಹೌದು, ಇನ್ನಾದರೂ ಹೆಚ್ಚೆಚ್ಚು
ಪ್ರೀತಿಸಬೇಕು
ಮಿಕ್ಕುಳಿದ ಸಮಯ ತುಂಬ ಕಡಿಮೆ
ಇನ್ನು ಅವಳು ಅಳುವುದಿಲ್ಲ
ಅಳದಂತೆ ನಾ ನೋಡಿಕೊಳುವೆ
ಯಮನೆ! ಸಮಯ ಕೊಡು.

‍ಲೇಖಕರು Admin

November 15, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: