ಉದಯಕುಮಾರ ಹಬ್ಬು ಕವಿತೆ – ಕಾಯುತ್ತ…

ಉದಯಕುಮಾರ ಹಬ್ಬು

ಅರಗಿನರಮನೆಗೆ ಬೆಂಕಿ
ಭೀಮನ ಹೆಗಲು‌ ಕಾದಿದೆ..‌

ದ್ರೌಪದಿ ಕಾದ ಕೆಂಡ
ಭೀಮನ ಪ್ರೀತಿಗೆ.

ಭರತ ಮಾತೆ
ಕಾದಿರುವ ಶಬರಿ.

ಪ್ಯಾಸೆಂಜರ್ ಕಾದ ಕಬ್ಬಿಣ
ಗುರಿ ಇಲ್ಲದ ಮುಟ್ಟದ ತಾಣಕೆ.

ಭರತನ ಶಿರಕೆ ರಾಮನ ಮೆಟ್ಟುಗಳ
ಭಾರ ಹೇಳತೀರದಾಗಿದೆ.

ರೋಗಿ ಶಮನವನು
ಹಸಿದವ ಅನ್ನವನು
ತರುಣ ಮದುವೆಯನು
ವಿದ್ಯಾರ್ಥಿ ಫಲಿತಾಂಶವನು.

ಕಾದಿದ್ದೆ ಬಂತು ಫಲಿತಾಂಶ
ಮುಂದೆ ಮರೀಚಿಕೆ ಹೊದಿಕೆ.
ಹೊಡೆದಾಡು ಸಿಂಹಾಸನ ನಿಶ್ಚಿತ.

ಕಾದು ಕಾದು ಬೆಂಡಾದ ಸೀತೆ
ರಾವಣನ ಬಂಧಿ.

ರಾಮಾ ರಾಮಾ ಹೆ ರಾಮಾ…!
ಆಡು ಜಗಳವಾಡು, ಕಾಡು ಹೊಡೆ ಒಡೆ

‍ಲೇಖಕರು Admin

August 22, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. prathibha nandakumar

    ಸಿಕ್ಕಾಪಟ್ಟೆ ಇಷ್ಟವಾಯಿತು. ಒಳ್ಳೆ ಕವನ

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: