ಈ ಬೇಸಿಗೆ ದಿನಗಳಲ್ಲಿ..

ಕೊಟ್ರೇಶ್ ಅರಸೀಕೆರೆ

ಈ ಬೇಸಿಗೆ ದಿನಗಳಲ್ಲಿ ಕಪ್ಪು ಟಾರಿನ ಹೆದ್ದಾರಿಗಳು ಕರಗುತ್ತಿಲ್ಲ
ಸೂರ್ಯ ಕಿರಣಗಳ ಶಾಖವೆಲ್ಲಾ
ಕಾರ್ಮಿಕರ ಕಣ್ಣೀರ ಹನಿಯ ಆವಿ
ಯಾಗಿಸುವುದರಲ್ಲೇ ದಿನ ತಳ್ಳುತ್ತಿದೆ!

ಮತ್ತಷ್ಟು ಗಾಢ,ಮತ್ತಷ್ಟು ಗಾಢ ಕಪ್ಪು
ಬಣ್ಣ
ಒಂದೊಂದು ಬೆವರ ಹನಿ, ಪಾದಕಂಟಿದ
ರಕ್ತ
ನಡೆದು ನಡೆದು …ಕಡುಗಪ್ಪು ಹೆದ್ದಾರಿ

ಆಕಾಶದಲಿ ಹಾರುತ ಕಪ್ಪು ಸಾಸರಲಿ ಸಕ್ಕರೆ
ರಹಿತ ಕಾಫಿ ಹೀರಿ ಬಂದ ಆತ್ಮಗಳ ದುರ್ಗಂಧಕೆ
ಎಷ್ಟು ಜೀವಗಳು ಕಪ್ಪಾದವು ಹೆದ್ದಾರಿಯ ವಿಷ
ವರ್ತುಲದಲಿ ಸಾಗಿ ಸಾಗಿ ಕಡುಗಪ್ಪು ರಕ್ತದಲಿ!

ತಮ್ಮದೇ ಕಲ್ಯಾಣ ನಿಧಿಯ ಸಹಸ್ರಾರು ಕೋಟಿ
ಎಲ್ಲಿ ಕಣ್ಣರೆಯಾದವೋ
ಭುವಿಯ ಉದ್ದುದ್ದ ಅಂತಸ್ತುಗಳ ಕಟ್ಟಿದ ಕೈಗೆ
ಬರಿಗಾಲ ಪಾದಸೇವೆ, ಅರೆಹೊಟ್ಟೆ ಯಾತ್ರೆ
ಯಾವ ಭೂ ಗರ್ಭಗುಡಿಯಲ್ಲಡಗಿದೆಯೋ ಕಲ್ಯಾಣ ನಿಧಿ ಕೊಪ್ಪರಿಗೆ!

ಮತ್ತೆಷ್ಟು ಹೆದ್ದಾರಿಗಳು ಕಡುಗಪ್ಪು ರಕುತಗಳಲಿ
ಮುಳುಗೇಳಬಹುದು
ರಕ್ಕಸರೆಲ್ಲಾ ಬಾಗೀನ ಬಿಡುವ ತವಕದಲಿ ಗುದ್ದಾಟ
ಕೆಂಪು ಬಾವುಟ ವಿಮಾನದೆತ್ತರಕ್ಕೆ ಏರಿಸಿ
ದವನಿಗೆ ಔತಣ ತಮ್ಮ ಹೆಸರಿನ ಆಹಾರ
ಕಿಟ್ಟುಗಳಲಿ
ಹಂಚುವಾಗ ಸೋರಿದನ್ನು ಬಾಚಿಕೊಂಡವನಿಗೆ
ಅದೇ ಮೃಷ್ಟಾನ್ನ

ಅವರು ಕಪ್ಪು ಹೆದ್ದಾರಿ ಸವೆಸಿ ಬರುವಷ್ಟರಲ್ಲಿ
ಇಲ್ಲಿ ಕೆಂಪು ಸಾರಿಗೆ ಸಿದ್ಧವಾಗುತ್ತಿದೆ ಹೆಣಹೊರಲು ಶುಲ್ಕದೊಂದಿಗೆ

ಚರಿತ್ರೆ ಪುಟಗಳು ಮತ್ತಷ್ಟು ಪುಟಗಳ ತಮ್ಮ
ಖಾತೆಗೆ ಸೇರಿಸಿಕೊಳ್ಳಬಹುದು
ಮತ್ತಷ್ಟು ಕಪ್ಪು ಮಸಿ ಸಿದ್ಧವಾಗಬಹುದು ರಕ್ತ
ಬಸಿದ ದೇಹಗಳಿಂದ ಪ್ರಜಾಪ್ರಭುತ್ವ ಘನತೆಗೆ!

ಪ್ರಭುತ್ವದ ಕಣ್ಣುಗಳಲ್ಲಿ ಕಪ್ಪು ಕಾಡಿಗೆ ಕಂಡೆ
ಕಣ್ಣು ತೆರೆಯದಷ್ಟು ಮಟ್ಟಿಗೆ!

‍ಲೇಖಕರು avadhi

May 29, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

3 ಪ್ರತಿಕ್ರಿಯೆಗಳು

  1. Santhosh Undadi

    ಸಮಕಾಲೀನ ವಿಷಯವನ್ನು ಆಯ್ದುಕೊಂಡು ವ್ಯವಸ್ಥೆಯ ಹುಳುಕುಗಳನ್ನು ಮತ್ತು ನೊಂದವರ ನೋವನ್ನು ಚೆನ್ನಾಗಿ ಚಿತ್ರಿಸಿದ್ದಿರಿ. ಪ್ರಭುತ್ವ ಸಾಮಾನ್ಯರ ಮಟ್ಟಿಗೆ ಯಾವಾಗಲೂ ಕುರುಡು. ಒಳ್ಳೆಯ ಕವಿತೆ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: