ಚಲಂ ಹಾಡ್ಲಹಳ್ಳಿ
ಈಗೇನ್ ಗೊರೂರು ಡ್ಯಾಂ ಅಂತ ಕರೀತಿವಿ… ಹೇಮಾವತಿ ನದಿಗೆ ಕಟ್ಟಿದ್ದು, ಆ ಡ್ಯಾಂನಿಂದಾಗಿ ಮುಳುಗಡೆಯಾದದ್ದು ಅದೆಷ್ಟೋ ಹಳ್ಳಿಗಳು. ಉಲಿವಾಲ ಅನ್ನೋ ಊರು ಅಂತಹಾ ಒಂದು ಮುಳುಗಡೆಯಾದ ಹಳ್ಳಿ. ಉಲಿವಾಲ ಮೋಹನ್ ಸರ್ ತಮ್ಮ ಊರಿನ ಕತೆ ಪ್ರತಿ ವಾರ ಬರೀತಾ ಹೋದ ಹಾಗೆ ನಾನು ಸುಮ್ಮನೆ ಕಣ್ಣೀರಾಗಿದೀನಿ. ಬದುಕನ್ನ ಅತ್ತಲಿಂದ ಇತ್ತಲಿಗೆ ಎತ್ತಿ ಬಿಸಾಕೋದು ಅಂತಾರಲ್ಲ… ಹಾಗೇ ಅನ್ಸಿದ್ದು.
ಆ ಕಾಲದ ಹಳ್ಳಿ ಜನಗಳ ಮನಸ್ಸು ಅದೆಷ್ಟು ಶುಭ್ರ, ಅದೆಷ್ಟು ಕಾಳಜಿಭರಿತ ಜೀವಗಳು. ಇವತ್ತು ಸಾಕಷ್ಟು ಜಿಲ್ಲೆಗಳ ಹಸಿರಿಗೆ ಕಾರಣವಾದ ಹೇಮಾವತಿಯ ಒಂದು ಮಹಾ ನಿಲ್ದಾಣದ ಹಿಂದೆ ಇನ್ನೂ ನಿಟ್ಟುಸಿರುಗಳಿವೆ… ತುಂಬಾ ಕಾಡುವ ಕೃತಿ ಉಲಿವಾಲ ಮೋಹನ್ ಕುಮಾರ್ ಅವರ ‘ಮುಳುಗಿದ್ದೆಲ್ಲಾ ಕಥೆಯಲ್ಲ’ …ಇದೇ ಶನಿವಾರ ಸಂಜೆ ಐದಕ್ಕೆ ಸರಿಯಾಗಿ ಪುಸ್ತಕ ಲೋಕಾರ್ಪಣೆ. ಮಿಸ್ ಮಾಡದೇ ಬನ್ನಿ ಇದರೊಟ್ಟಿಗೆ ಮತ್ತೆ ನಾಲ್ಕು ಪುಸ್ತಕಗಳು ನಿಮಗೆ ಸಿಗಲಿವೆ.
0 ಪ್ರತಿಕ್ರಿಯೆಗಳು