-ವೀಣಾ ಪಿ. / ಹರಿಹರ
ಮನಕೆ-ಮನ ಬೆರೆತು
ಮೇರೆ
ಮೀರಿದುತ್ತುಂಗದ
ಪಲ್ಲಂಗದಲಿ
ನನಗೆ ಅವನು;
ಅವನಿಗೆ ನಾನು..
ಆತು..
ಕೂತು..
ಹೊಸೆದು..
ಬೆಸೆದು..
ಮಸೆದ ಭಾವಗಳ
ಮಥಿಸುತ್ತಲೊದಗಿದ
ನವನೀತ
ಕಾವ್ಯ-ಕುಡಿಗಳ ಸೃಜಿತಕ್ಕೆ
ಮಾತೆ ನಾ..
ಮತ್ತವನು ಪಿತನಾಗಿ
ಕಾಮಕೇಳಿಯ
ಗೊಡವೆಯಿರದ
ಭಾವಗಳ
ಬಸಿರಲ್ಲಿ
ಸಾವಿರದ
ಚೇತನವು
ನಿತ್ಯವೂ
ಹುಟ್ಟುತಿರೆ
ಇನ್ನೆಲ್ಲಿ ಬಂಜೆತನ!?
ಬಂಜೆ ನಾನಲ್ಲ..
ಕವಿತೆಯನ್ನು ಕಂದನೆಂದೆಣಿಸಿರುವ ಭಾವ ವಿಶಿಷ್ಟ ಮತ್ತು ಹೃದಯಸ್ಪರ್ಶಿಯಾಗಿದೆ.
ಅದ್ಭುತ ಸಾಲುಗಳು…
ಕವಿತೆಯನ್ನು ಕಂದನೆಂದೆಣಿಸಿರುವ ಭಾವ ವಿಶಿಷ್ಟ ಮತ್ತು ಹೃದಯ ಸ್ಪರ್ಶಿಯಾಗಿದೆ.
ಅದ್ಭುತ ಸಾಲುಗಳು..