ಹಾವೇರಿ ನಿಮಗೆ ಗೊತ್ತು.. ಅಲ್ಲಿ ಶಿಗ್ಗಾವಿ ಇರುವುದೂ ಗೊತ್ತು
ಈಗ ನಾನು ಹೇಳುತ್ತಿರುವುದು ಸೊಲಬಕ್ಕನವರ್ ಎನ್ನುವ ವಿಶಿಷ್ಟ ಕನಸಿನ ಕಲಾವಿದರ ಬಗ್ಗೆ..
ಅವರಿಗೆ ಬದುಕು ಬಿಂಬಿಸುವ ಶಿಲ್ಪಗಳ ಒಂದು ಉದ್ಯಾನ ಮಾಡಬೇಕು ಅನಿಸಿತು
ಸೊಲಬಕ್ಕನವರ್ ಅವರೇ ಹಾಗೆ..
ಅವರಿಗೆ ಕನಸು ಬರೀ ಕನಸಲ್ಲ
ಅದನ್ನು ನನಸಾಗಿಸುವ ಛಲ ಅವರೊಗಿದೆ
ಇದಕ್ಕೆ ಸಾಕ್ಷಿಯಾಗಿ ಈ ಹಿಂದೆ ‘ಸಮುದಾಯ’ ರಂಗ ತಂಡಕ್ಕಾಗಿ ಅವರು ೧೦೦ ಅಡಿಗಳ ಬೃಹತ್ ಯುದ್ಧ ವಿರೋಧಿ ಕಲಾಕೃತಿಯನ್ನು ರಚಿಸಿದ್ದರು. ಗೆಳೆಯರ ಜೊತೆ ಸೇರಿ.
ಈಗಲೂ ಅವರು ಹಿಂದೆ ಮುಂದೆ ನೋಡಲಿಲ್ಲ ‘ಉತ್ಸವ ರಾಕ್ ಗಾರ್ಡನ್’ ನಿಜವಾಗಿ ಹೋಯಿತು
ಅದರಲ್ಲಿ ಜೀವಂತ ಇರುವವರೇ ಡಾ ರಾಜ್
ರಾಜ್ ಅವರನ್ನು ಬಿಂಬಿಸದೆ ಸಮಾಜವನ್ನು ಬಿಂಬಿಸಲು ಸಾಧ್ಯವೇ..?? ಹಾಗಾಗಿ ಇಲ್ಲಿ ನೋಡಿದಷ್ಟೂ ರಾಜ್ ಕಾಣಸಿಗುತ್ತಾರೆ
ನೀವು ಭೇಟಿ ನೀಡಲೇಬೇಕು
ಅವರ ಇಂತಹ ಅಸಾಧ್ಯ ಕನಸಿಗೆ ಭೇಷ್ ಎನ್ನಲೇಬೇಕು
0 ಪ್ರತಿಕ್ರಿಯೆಗಳು