ಮುದುಕಿ ಮತ್ತು ಅವನು
ಸಂದೀಪ್ ಈಶಾನ್ಯ
ವೃದ್ಧಾಶ್ರಮಕೊಂದು ಅರ್ಜಿ ಬರೆದುಕೊಡಿ ಎಂದು
ಬೀದಿ ಬೀದಿ ಅಲೆಯುವ ಮುದುಕಿಯ ಕಣ್ಣುಗಳಲ್ಲಿ
ಭೂತ ವರ್ತಮಾನ ಭವಿಷ್ಯವಿಲ್ಲ
ಅವಳ ಸುಕ್ಕುಗಟ್ಟಿದ ಮುಖದಲ್ಲಿ
ಅದೆಷ್ಟೋ ದಶಕಗಳಿಂದ
ಅನುಭವಿಸಿದ ದಿವ್ಯ ಅನುಭೂತಿಯಂತ
ನಾಚಿಕೆ ಕೋಪ ಅಸೂಯೆ ಪೋಲಿತನ
ಆಗೊಮ್ಮೆ ಈಗೊಮ್ಮೆ ಸುರಿಸಿದ ಕಣ್ಣೀರಿನ ಕಲೆಯಿದೆ
ಈಗ ಅದೆಲ್ಲಾ ಬಿಟ್ಟು ಒಂದೇ ಒಂದು ಖಾಲಿ ಅರ್ಜಿ ಹಿಡಿದು ತಿರುಗುತ್ತಿರುವ
ಈ ಮುದುಕಿಗೆ
ಮಧ್ಯಾಹ್ನದ ಬಿಸಿಯೂಟದ ಹೊತ್ತಿಗೆ
ಮಾಸ್ತರಿಗೆ ಕಲ್ಲುಹೊಡೆದು
ಪಾಟಿ ಚೀಲ ಎಸೆದು ಬಂದ
ಊರಿನ ತುಂಟ ಹುಡುಗನಾದರು
ಅರ್ಜಿ ಬರೆದುಕೊಡುವನೆಂದು
ಕಾಯುತ್ತಿದ್ದಾಳೆ
ಮುದುಕಿಯ ಕಣ್ಣುಗಳಲ್ಲಿ
ಕಾತುರವಿದೆ
ಆದರೆ
ನಾಳೆಯ ಕನಸಿಲ್ಲ
ದಶಕಗಳ ಹಿಂದೆ ಅವಳ ಮುಖದಂತೆ ಸುಕ್ಕಾಗಿದ್ದ ಅವಳ ಸೆರಗಿನ ತುದಿಯಲ್ಲಿ
ಕೂಡಿಟ್ಟ ಚಿಲ್ಲರೆಯಿಂದಲೆ
ಪರಮಾನ್ನ ಪಾನಕವ
ಉಂಡು
ಕುಡಿದು
ಈಗ ಎಲ್ಲಾ ಮರೆತಿರುವವನಂತೆ
ಪೇಟೆಯ ಜನಸಂದಣಿಯಲ್ಲಿ
ಕುತ್ತಿಗೆ ಬಿಗಿಯುವ ಟೈ ಹಾಗೂ ಕೋಟು ಧರಿಸಿ ಸೆಮಿನಾರುಗಳಲ್ಲಿ ತನ್ನದೇ ಅವ್ವನ ಕುರಿತು ಇನ್ನಿಲ್ಲದ ಕಥೆ
ಹೇಳುತ್ತ ಮಾತು ಮುಗಿಸುವ ಹೊತ್ತಿಗೆ ಕರ್ಚೀಫಿನಿಂದ
ಕಣ್ಣು ಒರೆಸಿಕೊಳ್ಳುತ್ತಾನಲ್ಲ
ಆ ಹುಡುಗ
ಅರೇ ಏನಿದು
ಮುದುಕಿ ಮತ್ತು ಹುಡುಗನ
ನಡುವೆ ಉಳಿದಿರುವ
ನೂರೆಂಟು ಪ್ರಶ್ನೆಗಳು
ಅದೇ ಸೆಮೆನಾರಿನ ಆ ಬದಿಯಲ್ಲಿ ಕೂತು
ಅವನ ಮಾತಿಗೆ
ಚಪ್ಪಾಳೆ ತಟ್ಟಿ
ವಾವ್ ಎಂದು ಉದ್ಗಾರವೆತ್ತಿ
ಗದ್ದಲ ಮಾಡುತ್ತಿರುವ ಅದೆಷ್ಟೋ ಜನರ
ಸಾವಿನಂಚಿನ ತಾಯಂದಿರು ಅಲ್ಲಲ್ಲಿ ಹರಿದ ಹಸಿರು ಸೀರೆಯುಟ್ಟು
ಬೀದಿ ಬೀದಿ ಅಲೆಯುತ್ತಿದ್ದಾರೆ
ಅರ್ಜಿ ಬರೆಸಲು
ಒಮ್ಮೆ ಅವಳತ್ತ ನೋಡಿ
ಸಾಧ್ಯವಾದರೆ ಅವಳ ತಲೆ ನೇವರಿಸಿ
ಜೊತೆ ಕೂತು ಅತ್ತುಬಿಡಿ
ನಿಮ್ಮ ಆ ಮದುಕಿಗೆ ಅಲ್ಲೂ ಸ್ಥಳವಿಲ್ಲ
ಅದಾಗಲೇ ವೃದ್ಧಾಶ್ರಮಗಳು
ಹೌಸ್ ಫುಲ್ ಬೋರ್ಡ್ ಹೊದ್ದು ಚಿಂತಿಸುತ್ತಿದ್ದಾವೆ
Mana kalakuva baraha adare aa tayandira makkala mana kalakuttillave aduve duranta
ನಿಮ್ಮ ಕವಿತೆ ಓದುತ್ತ “ಸೆರಗಿನ ತುದಿಗೆ ಗಂಟಿಕ್ಕಿದ ಕಾಸು ತೆಗೆದಿದ್ದರೆ” ಅನಿಸಿತು. ಅರೆ! ಮುಂದಿನ ಸಾಲಲ್ಲೆ ಈ ಶಬ್ದಗಳು.
ಮನ ಮುಟ್ಟುವ ಕವಿತೆ.
dhanyavadagalu
Yenta duranta makkalu yenta mundina peeligeya kalpane .. sandeep nizakku nimma kavitheya salu mai navirelusuttide
Samvedanaathmaka Kavite …..
Nice