ದಾಕ್ಷಾಯಿಣಿ ಭಟ್
ನಿಮಗೂ ಹೀಗಾಗಿದೆಯೇ…? ಅಥವಾ ನಮಗೆ ಮಾತ್ರವೇ…?
“ರಂಗಭೂಮಿಯೆಂಬುದು ತಳುಕುಬಳುಕಿನ ರಂಗಿನಾಟವೇ.. ತರಾವರಿ ಅಸೂಯೆಗಳ ವರ್ಣದಲ್ಲಡಗಿದ ಮುಖವಾಡಗಳೇ…?”
ರಂಗಧರೆಯೆಂಬುದು ಕಟ್ಟುವ ಕ್ರಿಯೆಯೇ ಹೊರತು ಒಡೆಯುವುದಲ್ಲ.
ಇದೇ ತಿಂಗಳ 25ರಂದು ” ದೃಶ್ಯ” ತಂಡ ಪ್ರಸ್ತುತ ಪಡಿಸುತ್ತಿರುವ “ಅಭಿಯಾನ” ನಾಟಕದ ಭಿತ್ತಿಚಿತ್ರವನ್ನು ಕಳೆದ ಮೂರ್ನಾಲ್ಕು ದಿನಗಳಿಂದ “ಕಲಾಕ್ಷೇತ್ರ” ದಿಂದ ಕಿತ್ತೊಗೆಯಲಾಗುತ್ತಿದೆ..
ಕಾರಣ ಕೇಳಿದರೆ..
“… ನಮಗೇನ್ ಗೊತ್ತು ಸ್ವಾಮಿ? ದಿವಸಕ್ಕೆ ಹತ್ತಾರು ಪೋಸ್ಟರ್ ಗಳು ಹಾಕ್ತಾರೆ.. ನಿಮ್ಮದೇ ಅಂತ ಕಾಯ್ತಾ
ಕೂರಲಿಕ್ಕಾಗುತ್ಯೇ..?” ಎನ್ನುತ್ತಾರೆ.
ಹೋಗಲಿಬಿಡಿ ಎಂದು ಮರುದಿನ ಮತ್ತೊಂದು ಭಿತ್ತಿಚಿತ್ರವನ್ನು ಹಾಕಿದರೆ.. ಅದೂ ಮಾಯವಾಗಿತ್ತು.
“ಟೌನ್ಹಾಲ್ ಕ್ಯಾಂಟೀನ್” ಬಳಿಯ ಟೀ ಅಂಗಡಿಯೆದುರಿಗೆ ಅಂಟಿಸಿದ್ದ ಭಿತ್ತಿಚಿತ್ರವೂ ಕಾಣೆಯಾಗಿತ್ತು.
ಈ ವಿಚಾರದಲ್ಲಿ ಇಂತಹ ಕಹಿ ಘಟನೆಗಳು ಹಲವಾರು ವರ್ಷಗಳಿಂದ ಘಟಿಸುತ್ತಲೇ ಬಂದಿದೆ.
ಇದು ಕಾಣದ ಕೈಗಳ ಕೈವಾಡವೇ…? ಎಲ್ಲಕ್ಕೂ ಕಾಲವೇ ಉತ್ತರಿಸಬೇಕು…
0 ಪ್ರತಿಕ್ರಿಯೆಗಳು