ಈ ದಿನ ೭೭ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಹೋಗಿದ್ದೆ. ಇಲ್ಲಿರುವ ಫೋಟೋಗಳು ರಸ್ತೆಯಲ್ಲಿನ ಕನ್ನಡ ಜಾತ್ರೆಯ ಧ್ಯೋತಕವೆನ್ನಬಹುದೇನೋ! ಜನ-ಜಾತ್ರೆ-ಜನ ಜಾತ್ರೆ….
ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಇದೆಲ್ಲಾ ಯಾಕೆ ಬೇಕು? ಎಂದು ಯೋಚಿಸುತ್ತಿತ್ತು, ಒಂದು ಜೀವನ ಶೈಲಿಗೆ ಒಗ್ಗಿಕೊಂಡಿರುವ ಈ ಮನ. ಆದರೆ ಆ ರಸ್ತೆಯಲ್ಲಿ ನಡೆಯುತ್ತಿರುವಾಗ, ಯಾರ್ಯಾರದ್ದೋ ಮೈಕೈ ತಗುಲುತ್ತಿರುವಾಗ, ಸೂರ್ಯನೂ ಮುಂದಾಗಿ ನನ್ನನ್ನೇ ಪ್ರೀತಿ ಮಾಡುತ್ತಿದ್ದಾಗ , ದ್ವನಿವರ್ಧಕದಲ್ಲಿ ಕನ್ನಡ ಮಾತುಗಳು ಕಿವಿಗಪ್ಪಳಿಸುತ್ತಿರುವಾಗ ನನಗನಿಸಿದ್ದು ” ಪ್ರಾದೇಶಿಕ ಸಂಸ್ಕೃತಿಯ ಬೇರಿನಿಂದ ಬೇರ್ಪಟ್ಟು ಸಾಹಿತ್ಯ ಚಿಗುರುವುದು ಅಸಾಧ್ಯ ತಾನೆ?”……ಹೂಂ ಒಂಥರಾ ಚೆನ್ನಾಗಿತ್ತು…..
0 ಪ್ರತಿಕ್ರಿಯೆಗಳು