ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನಾನಿಲ್ಲದ ನಿನ್ನೂರಿನ ಸಂತೆ…

ಶಂಕರಾನಂದ ಹೆಬ್ಬಾಳ

ನಿಸೂರ ನಿಭ್ರಾಂತ ಮನಸು
ಹಾರಾಡುತ್ತಿದೆ, ಗಗನದಿ
ಗರಿಬಿಚ್ಚಿದ ನವಿಲಂತೆ…!
ಅರಳಿದ ಸುಮದಂತೆ
ಹೃದಯ ನಿನ್ನೂರಿನ ಸಂತೆ…!

ತೃಪ್ತ ಭಾವದಲಿ
ತಪ್ತ ಕನಸುಗಳು
ಕುಡಿಯೊಡೆದಿವೆ ಸಖಿ…!
ನಿರ್ಲಿಪ್ತ ಮೌನ,
ಶಾಂತಿ ಚಳುವಳಿಯ
ವಕ್ತಾರ, ಇಂದುಮುಖಿ..!

ಪ್ರೇಮದುದಧಿಯಲ್ಲಿ
ಮಿಂದೆದ್ದು ಸ್ವರ್ಗದ
ಓಣಿಯಲ್ಲಿ ಕುಣಿಯುವೆ
ನಾನು ಗೆಜ್ಜೆ ಕಟ್ಟುತ್ತಾ…!
ಸಪ್ತಪದಿಯ ನೆಪದಿ
ಶಿಖೆಯ ಸುತ್ತಲೂ
ಸಖಿಯೊಂದಿಗೆ
ಹೊಸತಾಳ ಹಾಕುತ್ತಾ…!

ಹರೆಯ ಜಾರುವ ಮುನ್ನ
ಉರಿವ ಕನಸಿನ ಯಾನ
ಕಣ್ಣಲ್ಲಿ ಕರೆವ ಭಾವಲೋಕ
ಯಾಮಿನಿಯ ಧ್ಯಾನ…!
ನಿನ್ನೊಳಗಡಗಿದೆ
ಮರಳಿ ಬರದ ಪ್ರಾಣ…!

ಹೃದಯಗಳ ಮಾರಾಟ
ಕ್ರಯವಿಕ್ರಯಗಳ
ಯಾದಿಯಲ್ಲ
ಸರಕಿನ ಸಾಗಾಣಿಕೆಯಲ್ಲ..!
ಭಾವನೆಗಳ ಸ್ಪರ್ಶ
ಅನುಭವಕ್ಕೆ ಬರಲಿಲ್ಲ,,
ನಿನ್ನೂರಿನ,
ಸಂತೆಯಲಿ ನಾನೆ ಇಲ್ಲ….!

‍ಲೇಖಕರು Admin

16 November, 2022

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading