ನನ್ನವೆಂದು ಬರೆದುಕೊಳ್ಳುವಾಗ
– ಹರವು ಸ್ಫೂರ್ತಿ
ನಾನೊಂದು ಅರಣ್ಯವಾಗಿ ವಿಸ್ತಾರವಾದೆ
ಚಿಗುರಿ ಮರವಾದೆ; ಹಣ್ಣು ಬಿಟ್ಟು ತೂಗಿದೆ
ಸುರುಳಿ ಸುಳಿದು ಗಂಧವಾದೆ
ಎದೆ ಹರಡಿ ಜಲಪಾತವಾದೆ
ಭಾವ ಧುಮ್ಮಿಕ್ಕಿ ಸಾವಿರ ಕಡೆಗೂ ಪುಟಿದು
ಸಮುದ್ರದ ಬಯಕೆಯಿಂದ ಹರಿದೆ
ಅಗ್ನಿ ಆಕಾರ ತಳೆದರೂ ಉಗ್ರವಾಗಲಿಲ್ಲ
ಸಮಾಜದ ಎಲ್ಲಾ ವಿಚಿತ್ರ ಕೋನವೂ ನಾನಾದೆ
ಬೆಳಕಿನ ಭ್ರಮೆಗಳಿರುವುದು ಅದ್ಭುತ
ಖುಷಿಗೆ ಹೆಸರಿಡದೆ
ಬದುಕಿಕೊಳ್ಳುವಾಗ
ನನ್ನ ದುಃಖಕ್ಕೂ ನಿಮ್ಮೆಲ್ಲರ ದುಃಖಕ್ಕೂ ಅಂತರವೇ ಇರಲಿಲ್ಲ
ನಿಮ್ಮ ಒಡಲೇ ನಾನೆಂದು – ನನ್ನನೂ ಬರೆದುಕೊಂಡೆ
ಪಾಪ ವಾಹಕಳಾದೆ; ಎಲ್ಲರ ನೋವುವನ್ನು ಬಸಿದುಕೊಂಡೆ
ಕರ್ಮ, ಜಡತ್ವ, ಕೋಪ, ಹಿಂಸೆ, ನಿರಾಶೆಗಳ ತೀವ್ರ ಬಾಧಿಸಿಕೊಳ್ಳುತ್ತಾ
ದುಃಖದ ಕತೆ ಬರೆಯುತ್ತ ಸಂಕಟಕರ ಕಿವಿತೆ ಓದುತ್ತಾ
ಕವಿಯಾದೆ
ಉಳಿದ ಮೇಲೂ ಕಾಡಡವಿಯಾಗಿ ವಿಸ್ತಾರವಾದೆ
ಗಂಭೀರತೆ, ಶೋಕ, ಕತ್ತಲು
ಗೋರಿ ನೋಡಿ ಕಲ್ಲು ಹೃದಯದ ಕವಿ ಎಂದಿರಿ
ಕಾಂಕ್ರೀಟಿನೊಳಗಿಂದ
ಎರೆಡೆಲೆ ಅರಳಿಯಾಗಿ ಟಿಸಿಲೊಡೆದೆ
ಸೃಜನಶೀಲ ಕವಿತೆ, ಚನ್ನಾಗಿದೆ
spoorthi,why u put such an end abruptly, it could be a nice one…
ಒಳ್ಳೆಯ ಕವಿತೆ. ಕಾಂಕ್ರೀಟಿನೊಳಗೂ ಸೃಜನಶೀಲತೆ ಟಿಸಿಲೊಡೆಯಲು ಸಾಧ್ಯವಿದೆ. ಅಲ್ಲಿ ಕೂಡ ಸೃಜನಶೀಲ ಸೆಲೆಗಳಿವೆ ಎಂಬ ಸಾಲುಗಳಿಂದ ಕೊನೆಯಾಗುವ ಆಶಾವಾದಿಯಾದ ಕವಿತೆ ಜೀವಪರವಾಗಿದೆ.
nice..
gori nodi kallu hrudayada kavi andiri! wah! madaji nice kavite.
channada kavana madam
Bhaavanege koodalele jaaga sikkidaroo tisilodeyutte. Aa sthala nelavaadare hemmaravaagutte.