ಚಿಂದಿ ಚಿಂದಿ ಆಯುವವರು

ವಿ ಚಲಪತಿ

ರಾಜಹಂಸ, ಜೀವನ ಪ್ರಕಾಶನ
ಜೀವನ್ ಪ್ರಕಾಶನದ ರಾಜ್ಯಮಟ್ಟದ
ಯುಗಾದಿ ಕಾವ್ಯ ಸ್ಪರ್ಧೆ-2016ರ ಮೆಚ್ಚುಗೆ ಪಡೆದ ಕವಿತೆ
ಮುಂಜಾವಿನಲಿ
ಜೀವದ ಅನ್ವೇಷಣೆಗೆ
ಪ್ಯೂಪದಿಂದ ಹೊರ ಇಣುಕಿ
ರೆಕ್ಕೆಬಿಚ್ಚಿ ಭಗವಂತನ ಸ್ಮರಿಸಿ
ಬದುಕಿನೆಡೆಗೆ ಸಾಗುವ ಪತಂಗಕ್ಕೂ
ಇವರಿಗೂ ಬಹಳವೇನು ಭೇದವಿಲ್ಲ

ಕಳೆದ ಕಾಲದಲಿ ಮಿಂದು
ನಾಳೆಗಳೆಣಿಕೆಯನು ಮೀರಿ
ಇವತ್ತೆಂಬ ಜತನದಲಿ ಬದುಕುವ
ಮುಂಗುರುಳು ಗುಂಗಿನ
ರೂಪಾಯಿ ಲಗೋರಿಯ ಆಟದಲಿ
ದೂರದ ಬೆಟ್ಟಕೆ ಕಲ್ಲು ಬೀಸುತಾ
ಹರಿದ ಬಟ್ಟೆಗಳ ಮಂಚದಲಿ
ರಾತ್ರಿಯ ಸ್ವಪ್ನ ಕಾಣುವ
ಇವರಿಗೆ ಕಸದ ಬುಟ್ಟಿಯ
ಕನಸೇ ಹೊರತು ಬೇರೆ ಲೋಕವಿಲ್ಲ
ಇರುವರ ಜಗತ್ತಿನಲಿ
ಇವರ ಬದುಕು ಹೇಳತೀರದು ಗೌಣ
ಯಾರದೋ ಚಪ್ಪಲಿಗೆ ಪಾದ
ಬಟ್ಟೆಗೆ ದೇಹ, ಎಂಜಲಿಗೆ ಮೃಷ್ಟಾನ್ನ
ತಾರೆಗಳ ಒಯ್ಯಾರದಲಿ ಮಿನುಗುವ
ಗಗನವೇ ಮಹಲು, ಚಂದ್ರನೇ
ನಾಳೆಯ ಬದುಕಿಗೊಂದು ಆಶಾದೀಪ
ಅಮೂರ್ತ ರೂಪದಲಿ ಸಾಗುವ
ಮೇಘ ಸರಮಾಲೆಯೇ ತಣ್ಣೀರ
ಬಟ್ಟೆಯ ಬದುಕಿನ ದಾರಿಗೆ ಭರವಸೆ
ಇವೆಲ್ಲವುಗಳ ನಡುವೆ
ಭಗವಂತನ ಬದುಕಿನಾಟ’ಕ’ಕೆ ಮನ್ನಿಸಿ
ಬದುಕಿದಷ್ಟೂ, ಬದುಕಿನುದ್ದಕ್ಕೂ
ಬದುಕು ಸವೆಸುತ್ತಿರುವರು ತೀರುವುದೆಂಬ
ಹಂಬಲದ ದಾರಿಯೆಡೆಗಿನ ಕೊನರಿಗೆ





ಕವಿತೆ ಚನ್ನಾಗಿದೆ
ಈ ಬಾರಿ ನಿಮ್ಮ ಕವನ ಮೆಚ್ಚುಗೆ ಪಡೆದಿದೆ ಅಲ್ಲವಾ ಸರ್-ಜೀವನ ಪ್ರಕಾಶನ
Danyavadagalu
Naanantu Ee kaviteya huttige beragaagiddene nanna sampoorna sharanaagati nimma kavitege allade nimage
ಧನ್ಯವಾದಗಳು
ಧನ್ಯವಾದಗಳು ಸರ್