ಅದು ಹೀಗಾಯ್ತು- ಮಧ್ಯಾಹ್ನ ನನ್ನ ಚೇಂಬರಿಗೆ ‘ ಓವರ್ ಎ ಕಪ್ ಆಫ್ ಕಾಫಿ ‘ಗೆ ಬಂದ ಜಯಪ್ರಕಾಶ್ ಶೆಟ್ಟಿ ಸಿಕ್ಕಾಪಟ್ಟೆ ಖುಷ್ ಮೂಡ್ ನಲ್ಲಿದ್ದರು. ಜಯಪ್ರಕಾಶ್ ಶೆಟ್ಟಿ ಇದ್ದಲ್ಲಿ ಒಂದಷ್ಟು ತರಲೆ, ಜೋಕ್, ಮಿಮಿಕ್ರಿ, ಮೈಮ್, ಸಿಕ್ಕಾಪಟ್ಟೆ ನಗು ಇರಲೇಬೇಕು. ಹಾಗೇ ಆ ದಿನವೂ ಒಂದಿಷ್ಟು ಜೋಕ್ ಕಟ್ ಮಾಡಲು ಸಿದ್ಧರಾಗಿ ಬಂದಂತಿತ್ತು. ನನಗೆ ಆ ನಿಮಿಷ ಹೇಳತೀರದ ಕೆಲಸಗಳು. ನಾನು ಶೆಟ್ಟಿ ಜೋಕ್ ಗಳಿಗೆ ಖಂಡಿತಾ ಸಿದ್ಧನಿರಲಿಲ್ಲ. ಆದರೆ ಜಯಪ್ರಕಾಶ್ ಶೆಟ್ಟಿ ಬಿಡಲಿಲ್ಲ . ‘ನೀನೇ ಸಾಕಿದಾ ಗಿಣಿ, ನಿನ್ನ ಮುದ್ದಿನಾ ಮಣಿ, ಹದ್ದಾಗಿ ಕುಕ್ಕಿತಲ್ಲೋ..’ ಅಂತ ಹಾಡಲು ಶುರು ಮಾಡೇ ಬಿಟ್ಟರು. ಶೆಟ್ಟಿಗೆ ಯಾವಾಗಪ್ಪಾ ಈ ಹಾಡಿನ ಖಯಾಲಿ ಶುರುವಾಯ್ತು ಅಂತ ನಾನೂ ಮುಖ ಬಿಗಿ ಮಾಡಿ ಕುಳಿತೆ. ನನ್ನ ಬಿಗಿ ಮುಖಕ್ಕೆ ‘ಗೋಲಿ ಮಾರೋ’ ಎಂಬಂತೆ ‘ಡೋಂಟ್ ವರಿ ಚಿನ್ನ, ನಮಗೂ ಒಳ್ಳೆ ಟೈಂ ಬಂದೇ ಬರುತೈತೆ’ ಅಂತ ಇನ್ನೊಂದು ಹಾಡು ಶುರುವಿಟ್ಟುಕೊಂಡರು . ಶೆಟ್ಟಿ ಅಲ್ಲಿಗೇ ನಿಲ್ಲಿಸಲಿಲ್ಲ ‘ಇನ್ನು ಹತ್ತಿರ ಹತ್ತಿರ ಬರುವೆಯಾ …’ ಅಂತ ‘ಚಿತ್ರ’ ಹಿಂಸೆ ನೀಡತೊಡಗಿದರು. ಹಾಡು ಎಲ್ಲ ಖಾಲಿಯಾಯ್ತೇನೋ …’ಹೆಂಗೆ’ ಅನ್ನುವ ಹಾಗೆ ಮುಖ ನೋಡಿದರು. ಪೂರ್ಣ ಓದಿಗೆ: ಮೀಡಿಯಾ ಮೈಂಡ್ ]]>
‘sarkar’ uLidide. sarkar nadesuvavaru vijayotsvaa acharisuttuddare. haagidda mele inno0ndu malike barali.
RAO.