-ಹರೀಶ್ ಕೆ.ಆದೂರು
ಘಟನೆ 1 ಇಡೀ ಕನ್ನಡ ಚಿತ್ರರಂಗವೇ ದು:ಖ ತಪ್ತವಾಗಿದೆ. ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಅಭಿಮಾನಿ ವರ್ಗಗಳು ಜಮಾಯಿಸಿದ್ದಾರೆ. ಎಲ್ಲರ ಕಣ್ಣಲ್ಲೂ ಧಾರೆ ಧಾರೆ ಕಣ್ಣೀರು… ಆಕ್ರಂದನ… ಎಂದೂ ಕಂಡರಿಯದಷ್ಟು ಅಭಿಮಾನಿ ವರ್ಗ ಅಗಲಿದ “ಅಣ್ಣಾವ್ರಿಗೆ” ಕಂಬನಿ ಮಿಡಿಯುತ್ತಿರುವ ಸನ್ನಿವೇಶ. ಅದೆಲ್ಲಿಂದಲೋ ಬಂದ “ಸುದ್ದಿವಾಹಿನಿಯ” ವರದಿಗಾರರು ನೇರ ಅಗಲಿದ ನಾಯಕನ ಪತ್ನಿಯಲ್ಲೊಂದು ಪ್ರಶ್ನೆಯ ಬಾಣವನ್ನೇ ಎಸೆದರು “ನಿಮಗೇನನ್ನಿಸುತ್ತಿದೆ ಈಗ “…!!! ಘಟನೆ 2 ನಿಡುಗಾಲ ಬೆಳ್ಳಿತೆರೆಯಲ್ಲಿ ಕನ್ನಡವನ್ನು ಮಿನುಗಿಸಿದ ಸಾಹಸಸಿಂಹ ವಿಷ್ಣುವರ್ಧನ್ ಅಗಲಿದ ದಿನ. ಕನ್ನಡ ಚಿತ್ರರಂಗವೂ ಸೇರಿದಂತೆ ಅಭಿಮಾನಿಗಳು ನೋವಿನಲ್ಲಿ ಮುಳುಗಿದ್ದರು. 24×7 ಸುದ್ದಿವಾಹಿನಿಯೊಂದರ ವರದಿಗಾರರು ಭಾರತೀ ವಿಷ್ಣುವರ್ಧನ್ ಅವರ ಮುಂದೆ ನಿಂತು “ಈ ಸಂದರ್ಭದಲ್ಲಿ ನಿಮಗೇನನ್ನಿಸುತ್ತದೆ” ಎಂಬ ಪ್ರಶ್ನೆಯನ್ನು ಕೇಳಿದರು…!!! ಪೂರ್ಣ ಓದಿಗೆ ಮೀಡಿಯಾ ಮೈಂಡ್]]>
0 ಪ್ರತಿಕ್ರಿಯೆಗಳು