‘ಬಾಳೆಗಿಡ ಗೊನೆ ಹಾಕಿತು’ ಬರೆದು ಸಾಹಿತ್ಯ ಲೋಕಕ್ಕೆ ಅಧಿಕೃತ ಎಂಟ್ರಿ ಪಡೆದ ಬಿ ಎಂ ಬಶೀರ್ ಮುಂದೆ ಕುಳಿತಿದ್ದೆ. ಪುಟ್ಟ ವಯಸ್ಸಿನಲ್ಲಿ ದಟ್ಟ ಕಾಳಜಿಯನ್ನು ಹೊತ್ತ ಹುಡುಗ ಈತ. ತನ್ನ ಕವಿತೆ, ಕಥೆಗಳ ಮೂಲಕ ಎಂತಹವರನ್ನೂ ಸೂಜಿಗಲ್ಲಿನಂತೆ ಆಕರ್ಷಿಸಿಬಿಡಬಲ್ಲ.
ಮಂಗಳೂರಿನ ಬೈಕಂಪಾಡಿ ಕೈಗಾರಿಕಾ ಪ್ರದೇಶದ ಅವರ ಆಫೀಸಿನಲ್ಲಿ ಕುಳಿತಿದ್ದೆ. ‘ವಾರ್ತಾ ಭಾರತಿ’ಯ ಸುದ್ದಿ ಸಂಪಾದಕನಾದ ಬಶೀರ್ ತನ್ನ ಹಿಂದೆ ಇದ್ದ ಕಿಟಕಿಯತ್ತ ನನ್ನನ್ನು ಕರೆದೊಯ್ದ. ಕಿಟಕಿಯಿಂದ ಇಡೀ ಕೈಗಾರಿಕಾ ಜಗತ್ತೇ ಕಾಣುತ್ತಿತ್ತು. ಜಾಗತೀಕರಣದ ಒಂದೇ ಏಟಿಗೆ ತತ್ತರಿಸಿ ಮುಚ್ಚಿ ಹೋಗಿದ್ದ ಕೈಗಾರಿಕೆಗಳು, ಅದರ ವಿರುದ್ದ ಈಜುತ್ತಾ ಇನ್ನೂ ಏದುಸಿರು ಬಿಡುತ್ತಿರುವ ಕೆಲವು, ಒಂದು ಕಾಲಕ್ಕೆ ಮಂಗಳೂರನ್ನು ಅತಿ ಜೀವಂತ ಕೇಂದ್ರ ಎನಿಸಿದ್ದ ಈ ಪ್ರದೇಶ ಆ ಕಲರವವನ್ನು ಕಳೆದುಕೊಳ್ಳುತ್ತಾ ಸಾಗಿತ್ತು.
0 ಪ್ರತಿಕ್ರಿಯೆಗಳು