ಮುಂದೆ ಏನಾಗಬೇಕು ಅಂತಿದ್ದೀರಿ’ ಅನ್ನುವ ಪ್ರಶ್ನೆ ಒಗೆದಾಗ ಮದುವೆ ಆಗ್ಬೇಕು ಅಂತಿದ್ದೀನಿ ಅಂತ ಉತ್ತರ ಕೊಟ್ಟಿದ್ದು ದಾವಣಗೆರೆಯ ಚೇತನಾ ಮಾತ್ರ. ಬಹುಷಃ ಆಕೆಯನ್ನೊಬ್ಬಳನ್ನ ಬಿಟ್ಟರೆ ಇನ್ನೆಲ್ಲರ ಉತ್ತರ ಒಂದೇ- ರಿಪೋರ್ಟರ್.
ಬೆಂಗಳೂರು ವಿಶ್ವವಿದ್ಯಾಲಯದ ಎಂ ಸಿ ಜೆ ವಿಭಾಗದಲ್ಲಿ, ಎಲೆಕ್ಟ್ರಾನಿಕ್ ಮೀಡಿಯಾ ವಿಭಾಗದಲ್ಲಿ ಹುಬ್ಬಳ್ಳಿಯ ಐ ಎಂ ಆರ್ ಬಿ ಯಲ್ಲಿ, ಬೆಂಗಳೂರಿನ ಆಚಾರ್ಯ ಇನ್ಸ್ಟಿಟ್ಯೂಟ್ ನಲ್ಲಿ, ತುಮಕೂರಿನ ಸಿದ್ದಾರ್ಥ ಕಾಲೇಜಿನಲ್ಲಿ, ಮೈಸೂರಿನ ಮುಕ್ತ ವಿಶ್ವ ವಿದ್ಯಾಲಯದ ಕಾಂಟ್ಯಾಕ್ಟ್ ಕ್ಲಾಸ್ ಗಳಲ್ಲಿ, ವಿಜಾಪುರದ ಮಹಿಳಾ ವಿಶ್ವವಿದ್ಯಾಲಯದಲ್ಲಿ, ಹೀಗೆ ಹೋದಲ್ಲೆಲ್ಲಾ ಪ್ರಶ್ನೆ ಕೇಳಿದ್ದೇನೆ ಬಂದ ಉತ್ತರ -ರಿಪೋರ್ಟರ್.
ಈ ಅನುಭವ ಬರೀ ಯೂನಿವರ್ಸಿಟಿ ಕ್ಲಾಸ್ ರೂಮ್ ಗಳಲ್ಲಿ ಮಾತ್ರವಲ್ಲ ಗುಲ್ಬರ್ಗದ ಪತ್ರಿಕೋದ್ಯಮ ದಿನಾಚರಣೆಯಲ್ಲಿ ಸ್ತ್ರೀ ಜಾಗೃತಿ ನಡೆಸಿದ ಮೀಡಿಯಾ ವರ್ಕ್ ಶಾಪ್ ನಲ್ಲಿ, ನಮ್ಮ ನಮ್ಮ ನಡುವೆಯೇ ಜರುಗುವ ಖಾಸ್ ಬಾತ್ ಗಳಲ್ಲಿ
ಈ ಪ್ರಶ್ನೆ ಕೇಳಿದ್ದೇನೆ. ಬರುವ ಉತ್ತರ ಎಗೇನ್ ಅದೇ -ರಿಪೋರ್ಟರ್
ಪೂರ್ಣ ಓದಿಗೆ : ಮೀಡಿಯಾ ಮೈಂಡ್
ಸೇಡಂ ಗೆ ಬಂದು ನಮ್ಮ ಪ್ರೆಸ್ ಕ್ಲಬ್ ನ್ನು ಜಗತ್ತಿಗೆ ಪರಿಚಯಿಸಿದ ಜಿ.ಎನ್.ಮೋಹನ್ ರವರಿಗೆ ಅನಂತ ನಮನಗಳು.
. ‘ಅವಧಿ’ಯೊಳಗಿನ ಆಪ್ತತೆ ‘ಅವಧಿ’ ಮೀರಿದರೂ ಉಳಿಯುತ್ತದೆ.
-ಪ್ರಭಾಕರ ಜೋಷಿ ಸೇಡಂ