@@ ಸುವರ್ಣ ವಾಹಿನಿಯ ಪ್ಯಾಟೆ ಮಂದಿ….! ಅನ್ನಪೂರ್ಣ ಅನ್ನುವ ಸ್ಪರ್ಧಿಗೆ ಮನೆಗೆ ಹೋಗುವ ಮನಸ್ಸು ಉಂಟಾಗಿತ್ತು ಎಂದು ಕಾಣುತ್ತೆ .ಆಕೆ ತಮಗೆ ಕೊಟ್ಟ ಟಾಸ್ಕ್ ವಿಷಯಕ್ಕೆ ಸಂಬಂಧಪಟ್ಟಂತೆ ಸ್ವಲ್ಪ ಖ್ಯಾತೆ ತೆಗೆದಳು. ತನ್ನ ಗ್ರೂಪ್ ಜೊತೆ ಸಹಕಾರ ನೀಡಲಿಲ್ಲ. ಮೊದಲೇ ಇಂತಹ ಸಮಸ್ಯೆಗಳು ಇರುತ್ತವೆ ಎಂದು ತಿಳಿದಿದ್ದರೂ ಯಾವುದೋ ಉತ್ಸಾಹದಲ್ಲಿ ಈ ಹೆಣ್ಣುಮಗಳು ಬಂದು ಬ್ಯಾಡಪ್ಪ ಈ ಕಾಡು ಎನ್ನುವ ಸ್ಥಿತಿಗೆ ತಲುಪಿಕೊಂಡು ಬಿಟ್ಟಿದ್ರು. ಆಕೆಯನ್ನು ಎಲಿಮಿನೆಟ್ ಮಾಡಲಾಯಿತು .
ಕಡೆಯದಾಗಿ ಕಾರ್ಯಕ್ರಮದ ನಿರೂಪಕ ಅಕುಲ್ ಬಾಲಾಜಿ ಒಂದು ಮಾತು ಹೇಳಿದ್ರು, ನಿನ್ನ ಬದುಕಲ್ಲಿ ಯಾವುದೇ ಕಾರಣಕ್ಕೂ ಸಬೂಬು ಹೇಳಬೇಡ ನಿನ್ನ ಸೋಲಿಗೆ, ನೀನು ಸವಾಲನ್ನು ಎದುರಿಸದೆ ಇರುವ ಕಾರಣಕ್ಕೆ! ಅದು ನಿನ್ನ ಬೆಳವಣಿಗೆಗೆ ಒಳ್ಳೆಯ ಅಂಶವಲ್ಲ ( ಇದು ಅವರು ಹೇಳಿದ ಮಾತಿನ ಭಾವಾರ್ಥ ಅಷ್ಟೆ ) ಎಂದರು . ಎಷ್ಟೊಂದು ಸರಳ ಸತ್ಯ ಅಲ್ವ! ಈ ಅಂಶವು ಬದುಕಲ್ಲಿ ಅಳವಡಿಸಿಕೊಂಡರೆ… ! ತುಂಬಾ ಇಷ್ಟ ಆಯ್ತು ಅಕುಲ್ ನಿಮ್ಮ ಆ ಮಾತು ಸಚ್ಚಿ !
ಪೂರ್ಣ ಓದಿಗೆ : ಮೀಡಿಯಾ ಮೈಂಡ್
0 ಪ್ರತಿಕ್ರಿಯೆಗಳು