ಸದನದಲ್ಲಿ ಗಣಿ ಗಲಾಟೆ ನಡೀತಾ ಇದ್ದರೆ ನನಗೆ ಮತ್ತೆ ಮತ್ತೆ ಸಾಯಿನಾಥ್ ನೆನಪಿಗೆ ಬರ್ತಾ ಇದ್ದಾರೆ. ‘Everybody loves a good drought’ ಅನ್ನೋ ಬ್ಯೂಟಿಫುಲ್ ಇಮೇಜ್ ಅನ್ನ ಅವರು ಪತ್ರಿಕೋದ್ಯಮಕ್ಕೆ ಕೊಟ್ಟರು. ಇದು ಪತ್ರಿಕೋದ್ಯಮಕ್ಕೆ ಮಾತ್ರ ಅಲ್ಲ ಭ್ರಷ್ಟಾಚಾರವನ್ನ ವರ್ಣಿಸೋದಕ್ಕೆ, ಹಣ ಮಾಡೋರ ದರ್ಬಾರ್ ಬಣ್ಣಿಸೋದಿಕ್ಕೆ, ಜನಸಾಮಾನ್ಯರ ಹತಾಶ ಸ್ತಿತಿ ಹೇಳೋದಕ್ಕೆ ಎಲ್ಲಕ್ಕೂ ಒಂದು ಒಳ್ಳೆಯ ಸಾಲು. ಬರಗಾಲ ಅಂದ್ರೆ ಎಲ್ಲರಿಗೂ ಇಷ್ಟ..Everybody loves a good drought..
ಗಣಿ ಗಲಾಟೆ ಆಗ್ತಾ ಇರುವಾಗ ಯಾಕೆ ಇದು ಮತ್ತೆ ಮತ್ತೆ ನೆನಪಿಗೆ ಬಂತು ಅಂದ್ರೆ yes! Everybody loves mining. ಗಣಿಗಾರಿಕೆ ಮಾಡೋದಕ್ಕೆ ಎಲ್ಲರಿಗೂ ಇಷ್ಟ ಅನ್ನೋದು ಹೊಳೆದಾಗ. ‘ಗಣಿಗಾರಿಕೆ’ ಅನ್ನೋ ಶಬ್ದ ಹೇಗೆ ತನ್ನ ಒರಿಜಿನಲ್ ಅರ್ಥ ಬಿಟ್ಟುಕೊಟ್ಟು ಅಕ್ರಮ, ಭ್ರಷ್ಟಾಚಾರ, ದರ್ಬಾರ್ ಅನ್ನೋ ಅರ್ಥ ಪಡೆದುಕೊಂಡುಬಿಟ್ಟಿದೆ!
ಪೂರ್ಣ ಓದಿಗೆ- ಮೀಡಿಯಾ ಮೈಂಡ್
0 ಪ್ರತಿಕ್ರಿಯೆಗಳು