ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಹೊಸ ‘ಮೀಡಿಯಾ ಮಿರ್ಚಿ’ ಬಂದಿದೆ

‘ಡ್ಯಾಡ್ , you Know i got him back’ ಅಂತ ಫೋನ್ ಮಾಡಿದ್ದ ನನ್ನ ಮಗಳು ಕಿನ್ನರಿ ಇನ್ನೂ ಹತ್ತನೇ ತರಗತಿಯನ್ನೂ ದಾಟಿಲ್ಲ. ಆದರೆ ಅವಳ ದನಿಯಲ್ಲಿ ಆಗಲೇ ಒಂದು ದೊಡ್ಡ ಚಾನಲ್ ನ ಕಿವಿ ಹಿಂಡಿದ ಉತ್ಸಾಹ ಇತ್ತು.  .ಆಗಿದ್ದು ಇಷ್ಟು- ‘ದಿಲ್ ಮಿಲ್ ಗಯೇ’  ಅನ್ನುವ ಸೀರಿಯಲ್ ಇವತ್ತಿನ ಅತ್ಯಂತ ಪಾಪ್ಯುಲರ್ ಸೀರಿಯಲ್. ಅದರಲ್ಲೂ ‘ಮಿಲ್ಸ್ ಆನ್ಡ್ ಬೂನ್ಸ್’ ಓದುವ ವಯಸ್ಸಿಗೆ ಎಂಟರ್ ಆಗುತ್ತಿರುವವರಿಗೆ ಹೇಳಿ ಮಾಡಿಸಿದ ಷೋ. ಈ ಸೀರಿಯಲ್ ನ ಹೀರೋ ಕರಣ್ ಸಿಂಗ್ ಗ್ರೋವರ್. ಪಡ್ಡೆ ಹುಡುಗರ ಕನಸುಗಳಿಗೆ ಲಗ್ಗೆ ಇಟ್ಟಾತ.  ಈ ಕರಣ್ ಸಿಂಗ್ ಗ್ರೋವರ್ ಹಾಗೂ ಜನ್ನಿಫರ್ ವಿಂಗೆಟ್ ನಡುವೆ ಪ್ರೇಮಾಂಕುರವಾಗುತ್ತದೆ.  ಅದಕ್ಕೇ ಎಂದಿನಂತೆ ನೂರೆಂಟು ವಿಘ್ನ.  ಅದನ್ನೆಲ್ಲಾ ಎದುರಿಸಿ ಇನ್ನೇನು ಮದುವೆ ಆಗಬೇಕು ಎನ್ನುವಾಗ ಕಥೆಗೊಂದು  ಟ್ವಿಸ್ಟ್. ಗುಂಡಿನ ದಾಳಿಯಲ್ಲಿ ಇವರಿಬ್ಬರೂ ಕುಸಿದು ಬೀಳುತ್ತಾರೆ.

ಆದರೆ ಮುಂದಿನ ವಾರ ಈ ಸೀರಿಯಲ್ ನೋಡಿದವರಿಗೆ ಷಾಕ್ ಕಾದಿತ್ತು. ಪಡ್ಡೆ ಹೈದರ ಫೇವರೈಟ್ ಕರಣ್ ಸಿಂಗ್ ಗ್ರೋವರ್ ಆತನ ಲವರ್ ಜೆನಿಫರ್  ಇಬ್ಬರೂ ಸೀರಿಯಲ್ ನಿಂದ ಎತ್ತಂಗಡಿಯಾಗಿದ್ದರು. ಆ ಜಾಗಕ್ಕೆ ಹೊಸ ಮುಖಗಳು ಬಂದು ಕೂತಿದ್ದವು. ಕಥೆಯೂ ಸಹಾ ಲಂಗು ಲಗಾಮಿಲ್ಲದೆ ಸಿಕ್ಕ ಸಿಕ್ಕ ದಿಕ್ಕಿಗೆ ಓಡುತ್ತಿತ್ತು.

ಆ ಸೀರಿಯಲ್ ನಲ್ಲಿ ಹೀಗಂತೆ ಅಂತ  ಗುಲ್ಲೋ ಗುಲ್ಲು.. ನಮ್ಮ ಮನೆಯಲ್ಲೂ ಶೋಕದ ವಾತಾವರಣ . ಕರಣ್ ಸಿಂಗ್ ಗ್ರೋವರ್ ಇಲ್ಲದ ದಿಲ್ ಮಿಲ್ ಗಯೇ ಓಡುತ್ತಾ .? ಅಥವಾ ಈ ಪಡ್ಡೆಗಳ ಭಾಷೆಯಲ್ಲೇ ಹೇಳಬೇಕೆಂದರೆ ‘can you imagine DMG without  KSG’.  ದಿನಗಟ್ಟಲೇ ಇದೇ ಚರ್ಚೆ. ಫೋನ್ ತಿರುಗಿಸಿ  ದುಖ ತೋಡಿಕ್ಕೊಳ್ಳುವುದೇನು.. ಆ ಕಡೆಯಿಂದ ಫೋನ್ ಮಾಡಿದವರ ಆಕ್ರೋಶವೇನು.. ಕರಣ್ ಸಿಂಗ್ ಗ್ರೋವರ್ ಗೆ ಅನ್ಯಾಯ ಆಗಿ ಬಿಟ್ಟಿದೆ ಅಂತ ರಕ್ತ ಕುದಿಸಿಕೊಂಡವರೆಷ್ಟು..

ಪೂರ್ಣ ಓದಿಗೆ ಭೇಟಿ ಕೊಡಿ- ಮೀಡಿಯಾ ಮೈಂಡ್

‍ಲೇಖಕರು avadhi

12 April, 2010

1

ನಿಮಗೆ ಇವೂ ಇಷ್ಟವಾಗಬಹುದು…

ದೆಹಲಿಯಲ್ಲಿ ರಹಮತ್

ದೆಹಲಿಯಲ್ಲಿ ರಹಮತ್

ದೆಹಲಿಯಲ್ಲಿ ರಹಮತ್ ತರೀಕೆರೆ : ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತರಲ್ಲಿ ಅತ್ಯಂತ ಕಿರಿಯರು! ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಸ್ವೀಕರಿಸಲು ದೆಹಲಿಗೆ ಬಂದ ರಹಮತ್ ತರೀಕೆರೆ ಅವರೊಂದಿಗೆ ಕೆಂಪುಕೋಟೆಗೆ ಒಂದಷ್ಟು ಸಮಯ ಕಳೆಯಬೇಕು ಎನ್ನುವ ಇರಾದೆಯಿತ್ತು. ಕೆಂಪುಕೋಟೆಯ ಪರವಾಗಿ ವೈ. […]

ಪ್ರಸಾದ್ ಸ್ವಗತ…

ಪ್ರಸಾದ್ ಸ್ವಗತ…

– ಜಿ.ರಾಜಶೇಖರ ಉಡುಪಿ ನಿಮ್ಮ ಕವಿತೆಗಳು ನಿಜಕ್ಕೂ ಒಳ್ಳೆಯ ರಚನೆಗಳಾಗಿವೆ. ಕಾವ್ಯದ ಲಯದಲ್ಲಿ ನೀವು ತುಂಬಾ ವೈವಿಧ್ಯಮಯವಾದ ಪ್ರಯೋಗಗಳನ್ನು ನಡೆಸಿದ್ದೀರಿ. ಹೊಸಗನ್ನಡ ಕಾವ್ಯದ ಕೆ.ಎಸ್.ನ.,ಅಡಿಗ , ಬೇಂದ್ರೆ ಮುಂತಾದ ಕವಿಗಳ ಸಾಲುಗಳನ್ನು ಸಹ ನೀವು ತುಂಬಾ ಅರ್ಥ ಪೂರ್ಣವಾಗಿ ದುಡಿಸಿಕೊಂಡಿದ್ದಿರಿ. ಇದು ನನಗೆ […]

ನಗ್ತಾರೆ ರಾಮಯ್ಯ

ನಗ್ತಾರೆ ರಾಮಯ್ಯ

-ಸೂತ್ರಧಾರ ರಾಮಯ್ಯ ಮುನ್ ನಗೆ ನುಡಿ ಜೀವನವನ್ನು ವಿಕಟ ದೃಷ್ಟಿಯಿಂದ ನೋಡುವ , ಆಡುವ ಮಾತಿನಲ್ಲಿ ಗಾದೆಗಳನ್ನು ಬಳಸುತ್ತಾ ಶ್ಲೇಶಾರ್ಥಗಳನ್ನು ಹೊರಡಿಸುವ ಹವ್ಯಾಸ ನನಗೆ ಬುದ್ಧಿ ಬಂದಾಗಿನಿಂದ ಇದೆ. ಈ ಗೀಳು ನನಗೆ ಯಾವಾಗ, ಯಾರಿಂದ ಅಂಟಿಕೊಂಡು ಎಂದು ಒಮ್ಮೆ ಹಿಂದಿರುಗಿ […]

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading