ಇಮ್ತಿಯಾಜ್ ಶಿರಸಂಗಿ ಕವಿತೆ – ‘ಹೇಳಿ ನಿಮ್ಮದ್ಯಾವಗುಂಪು’ ?

ಇಮ್ತಿಯಾಜ್  ಶಿರಸಂಗಿ

ಮನಸುಗಳು ಮಾರಾಟಕ್ಕಿವೆ ಇಲ್ಲಿ
ಧರ್ಮದ ಅಮಲು ನೆತ್ತಿಗೇರಿಸಿ
ಕೊಳ್ಳುವವರು ಬೇಕಷ್ಟೇ.

ಮೆದುಳನ್ನು ಕೊಂಡುಕೊಳ್ಳುವುದು
ಇಲ್ಲಿ ಬಾರಿ ಸುಲಭ,,

ಇತಿಹಾಸವನ್ನು ಕೆದಕಬೇಕು
ಬೇಕಾದವರನ್ನು ಸೇರಿಸಬೇಕು
ಬೇಡವಾದವರನ್ನು ಕೈಬಿಡಬೇಕು
ಪುಂಖಾನುಪುಂಖ ಸುಳ್ಳುಗಳನ್ನು
ಶೃಂಗರಿಸಿ ಬಿತ್ತರಿಸಬೇಕು ಅಷ್ಟೇ!…

ಎಲ್ಲಿಯೂ ಇರದ ಒಂದು
ವಿಶೇಷ ಅಳತೆಗೋಲು ಇಲ್ಲಿದೆ

ಕಣ್ಣಿಗೆ ದೇಶಪ್ರೇಮದ ಬಟ್ಟೆ ಕಟ್ಟಿ
ಅನ್ಯಾಯವನ್ನು ಹುಡುಕು ಎನ್ನುತ್ತಾರೆ
ಸುಳ್ಳು ಹೇಳಿದರಷ್ಟೇ ಅಟ್ಟ….!
ಸತ್ಯವಾಡಿದರೆ ಜೈಲು…!
ಮಡಿಕೆ ಮುಟ್ಟಿದರಂತೂ ಚಟ್ಟ ….!

ನಿರ್ಧಯವಾಗಿ ಮುಕ್ಕಿ ತಿಂದ
ಅತ್ಯಾಚಾರಿಗಳನ್ನು
ಸೋಕಾಲ್ಡ್ ಪುರುಷರನ್ನು,

ಹಾರಹಾಕಿ ತಿಲಕವಿಟ್ಟು
ಸ್ವಾಗತಿಸುತ್ತಾರೆ.
ಸನ್ನಡತೆ ಆಧಾರದ ಮೇಲೆ
ಬಿಡುಗಡೆಯಾದವರನ್ನು.

ಇದು ಸ್ವತಂತ್ರೋತ್ಸವದ ವಿಶೇಷ ಕೊಡುಗೆ.

ಸನ್ನಡತೆಯೇ?? ಹೌದು ಹೌದು
ನೀವು ನಂಬಲೇಬೇಕು.
ಈಗ ಬದಲಾಗಿಹೋಗಿದೆ
ಪದಕೋಶದ ಶಬ್ದಗಳು.

ಅತ್ಯಾಚಾರಿಗಳೆಂದರೆ
ಸನ್ನಡತೆ ಉಳ್ಳವರು,
ಸತ್ಯವನಾಡುವವರು
ದೇಶದ್ರೋಹಿಗಳು,
ಪ್ರಶ್ನಿಸುವವರು
ಅರ್ಬನ್ ನಕ್ಸಲರು..

ಉದ್ದುದ್ದ ನಾರೀಶಕ್ತಿ ಭಾಷಣ…
ನೀರಲ್ಲಿ ತೊಳೆದ ಹಾಗೆ ಹುಣಸೆಹಣ್ಣ..
ಎಲ್ಲವೂ ಬರಿ ಕಾಂಚಾಣ. ಕಾಂಚಾಣ…

ಜನರನ್ನು ಮಳ್ಳು ಮಾಡುವುದು ಹೇಗೆ??
ಎಂಬ ಸಮಿತಿಯನ್ನು ರಚಿಸುತ್ತಿದ್ದಾರೆ.
ಮನಸ್ಸು-ಮೆದುಳು
ಇನ್ನೂ ಮಾರಾಟವಾಗದೆ
ಇರುವವರನ್ನು ಹುಡುಕುತ್ತಿದ್ದಾರೆ..

ಹೇಳಿ
ನಿಮ್ಮದ್ಯಾವ
ಗುಂಪು ??.

‍ಲೇಖಕರು Admin

October 19, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: