ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಹೆಗಲು ಕೊಡುವೆಯೇನೇ ಅಕ್ಕಾ..

ನೊಂದ ಕನಸು

girija shastri

ಗಿರಿಜಾಶಾಸ್ತ್ರಿ

lady“ಅಕ್ಕ ಕೇಳವ್ವ ನಾನೊಂದ ಕನಸ ಕಂಡೆ”
ಆಲಯಗಳೆಲ್ಲ ಬಿದ್ದು ಹೋದವು
ಅದರೊಳಗೆ ಸಿಕ್ಕಿದ ‘ಹೆಣ್ಣು’ ‘ಗಂಡು’ ಗಳು ಜಜ್ಜಿಹೋದವು
ಗಂಟೆ ಬಾರಿಸುತ್ತಲೇ ಪೂಜಾರಿ
ಧರೆಗುರುಳಿದ
ಮಸೀದಿಯ ಮುಲ್ಲನೂ
ಇಗರ್ಜಿಯ ಪೋಪನೂ

ಹೊರಗೆ ಕಾಯುವ ಹೊಲೆಮಾದಿಗರೂ ನೆಲಸಮವಾದರು.
ಧನಿಕ ಮಾಲಿಕ ಎದೆಯೊಡೆದು ಸತ್ತ
ಸಾಲುಗಟ್ಟಿದ ಭಿಕಾರಿಗಳು ಕುಳಿತಲ್ಲೇ ಕುಸಿದರು.

ಎಲ್ಲ ಹೆಣಗಳನ್ನೂ ಈಗ ಸಾಗಿಸಬೇಕಾಗಿದೆ ಸ್ಮಶಾನಕ್ಕೆ
ಹೆಗಲು ಕೊಡುವೆಯೇನೇ ಅಕ್ಕಾ…
ರಕ್ತಸಿಕ್ತ ಬಯಲ
ತೊಳೆಯಬೇಕಾಗಿದೆ
ಕೈ ನೀಡುವೆಯೇನೇ..

ಎಲ್ಲಾ ಸುಟ್ಟುರುಹಿದ ನೆಲದಲ್ಲಿ
ಹೊಸಬೀಜ ಬಿತ್ತಬೇಕಾಗಿದೆ
ನಿನ್ನ ಚೆನ್ನಮಲ್ಲಿಕಾರ್ಜುನನ
ಕಳುಹಿಸುವೆಯೇನೇ
ನನ್ನ ಸಂಗಾತಕ್ಕೇ..

‍ಲೇಖಕರು Admin

22 February, 2016

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading