ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಹೂವೊಂದು ಹಾಡಿದೆ…

ಸುರೇಶ ಎಲ್.ರಾಜಮಾನೆ

ಮಸನದಂತಿರೋ ನನ್ನಯ ಮನದಲಿ
ಹೂವೊಂದೀಗ ಅರಳಿದೆ
ನೀರಿಲ್ಲ, ಬೆಳಕಿಲ್ಲ, ಬರಿ
ಭಾವವನುಂಡು ಬೆಳೆದಿದೆ.

ಯಾರೋ ಬೀಸಿದ ಕಲ್ಲಿಗು ಮೆಲ್ಲಗೆ
ಮಾತಿಗೆ ಎಳೆದು ಕರೆದಿದೆ
ಸಾವನು ನೋವನು ಎದೆಯಲಿ ನುಂಗಿ
ನಗುತಲಿ ಎಲ್ಲರ ಸೆಳೆದಿದೆ

ಸುಡುವ ಬೆಂಕಿಯ ಬೆಚ್ಚನೆ ಸ್ಪರ್ಶಕೆ
ಬೆಚ್ಚುತ ಬೆರಗಲಿ ನಿಂತಿದೆ
ನೆನಪಿಗೆ ಹಚ್ಚಿದ ಚುಚ್ಚುವ ಮುಳ್ಳಿನ
ಮರದಡಿ ಬದುಕು ಸಾಗಿದೆ

ಅತ್ತರು ಸತ್ತರು ಹರಿದರು ನೆತ್ತರು
ಚಂದದ ಚಿತ್ತಾರ ಬಿಡಿಸಿದೆ
ಉತ್ತರವಿಲ್ಲದ ಪ್ರಶ್ನೆಯೇ ಸಾವಿರ
ಎಚ್ಚರ ತಪ್ಪದೇ ನಡೆದಿದೆ

ಬಾಯಿಗೆ ಹಾಕುವ ಅಕ್ಕಿಯ ಕಾಳಿಗು
ಅನ್ನದ ಋಣವ ಹೇಳಿದೆ
ತನ್ನವರೆಂಬುವ ತಂತಿಯೇ ಹರಿದರು
ಭಾವದ ಗೀತೆಯ ಹಾಡಿದೆ

‍ಲೇಖಕರು Avadhi

2 December, 2018

5 Comments

  1. Jahanara

    ಸುಂದರ ಕವನ
    ಅಭಿನಂದನೆಗಳು ಸರ್

  2. Parasappa vanageri

    Super

  3. Jahanara

    ಸುಂದರ ಕವನ ಸರ್
    ಅಭಿನಂದನೆಗಳು

  4. ಯಲ್ಲಪ್ಪ ಎಮ್ ಮರ್ಚೇಡ್

    ಸೂಪರ್ ಕವಿತೆ ರಾಜಮಾನೆ ಸರ್

  5. ರನ್ನ ಕಂದ

    ಹೂವಿನ ಚೆಲುವು
    ಮಾಸದ ಗೆಲುವು

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading