ಹೀಗೊಂದು ಯಕ್ಷಿಣಿ ವಿದ್ಯೆ ಇರಬೇಕಿತ್ತು..

 

 

 

ಸುನೀತ ಹೆಬ್ಬಾರ್

 

 

 

 

ಪೂತಿನಿಯ ಮೊಲೆ ಹಾಲ ಕುಡಿದಂತೆ
ಗೋರಖ್ ಪುರದಲ್ಲಿ ಬಲಿಯಾದ ಕಂದಮ್ಮಗಳೆಲ್ಲ ಮತ್ತೆ
ತನ್ನಮ್ಮ ತೂಗುವ ತೊಟ್ಟಿಲಲ್ಲಿ
ನಗುತ್ತ ಮಲಗುವಂತೆ ಮಾಡುವ
ಯಕ್ಷಿಣಿ ವಿದ್ಯೆಯೊಂದು ಇರಬೇಕಿತ್ತು .

ಪ್ಯಾಲೆಸ್ತೇನ್ ,ಬರ್ಮಾದ ರೊಹಿಂಗ್ಯ
ಮಕ್ಕಳೆಲ್ಲ ಎಂದಿಗೂ ಎಡವದಂತೆ ,
ಜಾರಿ ಬೀಳದಂತೆ ,ಮುಳ್ಳುಕಂಟಿಗಳನ್ನೆಲ್ಲ
ಅವರ ಹಾದಿಯಿಂದ ಕಿತ್ತೊಗೆದು
ಮಕ್ಕಳಿಗೆಲ್ಲ ಒಂದೊಂದೇ ಹೂ ಮುತ್ತನಿಟ್ಟು ಹೂದೋಟದಲ್ಲಿ ಆಟವಾಡಲು ಬಿಡುವಂತಹ
ಯಕ್ಷಿಣಿ ವಿದ್ಯೆಯೊಂದು ಇರಬೇಕಿತ್ತು

ಸಿರಿಯಾದ ಸಮುದ್ರತೀರದಲ್ಲಿ ಬಿದ್ದಿದ್ದ
ಹಸುಗೂಸು ಅಯಾನನನ್ನು ಎತ್ತಿ
ಅವನ ಮೊಣಕಾಲಿಗೂ ಅಲೆತಾಗದಂತೆ
ದಡದ ಮರಳಲ್ಲಿ ಪುಟ್ಟ- ಪುಟ್ಟ ಹೆಜ್ಜೆಯನ್ನಿಡಿಸಿ ನಡೆಸುತ್ತಾ
ಸಮುದ್ರದ ಬೆರಗನ್ನು ಅವನಿಗೆ ತೋರಿಸಲು
ಯಕ್ಷಿಣಿ ವಿದ್ಯೆಯೊಂದು ಇರಬೇಕಿತ್ತು.

ಕೊಲೆಯಾದ ದಾನಮ್ಮ , ನಿರ್ಭಯಾರೆಲ್ಲ
ಮತ್ತೊಮ್ಮೆ ನಮ್ಮ ನಡುವಲ್ಲಿ
ಘನತೆಯ ಬದುಕು
ಹೊಂದುವಂತೆ ಮಾಡಲು
ಯಕ್ಷಿಣಿವಿದ್ಯೆಯೊಂದು ಇರಬೇಕಿತ್ತು

ಸದಾ ಬಾವಲಿಯಂತೆ
ಎಲ್ಲವನ್ನೂ ತಲೆಕೆಳಗಾಗಿಯೇ ನೋಡುವಂತ
ಈ ರಕ್ತಪಿಪಾಸುಗಳಿಗೆಲ್ಲ
ಗಾಂಧಿಯೋ,ಬುದ್ಧನೋ ಶಾಂತಿಯ ಪಾಠ ಕಲಿಸುವಂತ
ಜಗದ ಗಾಯಗಳಿಗೆಲ್ಲ ಮುಲಾಮು ಸವರುವಂತ
ಯಕ್ಷಿಣಿವಿದ್ಯೆಯೊಂದು ಇರಬೇಕಿತ್ತು.

 

‍ಲೇಖಕರು Avadhi GK

February 6, 2018

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: