ಸ್ಪೂರ್ತಿ ಗಿರೀಶ್ ಹೊಸ ಕವಿತೆ- ಕನಸಿನ ಕಣ್ಣು

ಸ್ಪೂರ್ತಿ ಗಿರೀಶ್

೧.
ರಕ್ತ ಹೆಪ್ಪುಗಟ್ಟಿದ
ಖಾಲಿರಸ್ತೆಯಲಿ
ಇರುವೆ ಸೈನ್ಯದ ಗಸ್ತು

೨.
ಸಂಜೆ ಐದರ
ಗಡಿಯಾರದ ಮುಳ್ಳು
ಮುರಿದು
ಇರುಳು ಕಳೆಯದ ಹೆಣಭಾರ

೩.
ಮಳೆ ಸುರಿದು ನದಿ ಹರಿದು
ಅವನ ಮಕ್ಕಳು ನನ್ನ ಮಕ್ಕಳು
ಗಂಜಿಕೇಂದ್ರದಲ್ಲಿ
ಕಾಗದದ ದೋಣಿ ಆಟವಾಡಿಕೊಂಡವು

೪.
ಮುರಿದ ಕೀಲು ಕಳಚಿದ ನೊಗ
ಸವೆದ ಗಾಲಿ
ಪಯಣ ಮಲಗಿದೆ

೫.
ಮರಳಲ್ಲಿ ಬರೆದ ನದಿಯ ಹೆಸರನು
ಕಡಲು ಅಳಿಸಿ ಹಾಕಿದೆ

೬.
ನೀನು
ನೆನಪಿಗೆಂದು ಕೊಟ್ಟಿದ್ದ
ಉಂಗುರವನ್ನು
ಒಣಮೀನು ನುಂಗಿದೆ

೭.
ಅವನ ಊರಿನಲ್ಲಿ ನಿಲ್ಲದ ಮಳೆ
ಕಳಿಸಿದ ತಾರು
ಅಂಗಳ ತಲುಪದೆ ಮರಳಿದೆ

೮.
ಎಂಥ ಪಳಗಿದ ಮೀನು
ನೀನು
ಗಾಳವನ್ನು ನುಂಗಿದೆ

೯.
ಮರಳು
ಕೈ ಕಟ್ಟಿ ದಡದಲ್ಲಿ
ಬಿಮ್ಮಗೆ ನಿಂತರು
ಕಾಲುಗಳ ಕಡಲತ್ತ ಎಸೆದಿದೆ

೧೦.

ರಾತ್ರಿ
ಎವೆಗಳಲ್ಲಿ
ತುಂಬಿಕೊಂಡಿದೆ ಬೆಳದಿಂಗಳು

ಸಂಜೆ
ಎಲೆಹೊಡೆದ ಬಿದಿರು ತೂಗುತ್ತಿದೆ
ಗಾಳಿ
ಹಾಡುವ ಝಲಕಿಗೆ ಪುಳಕಗೊಂಡು

ಬೆಳಗು
ನೀನು
ಉದಯಿಸಲು
ಲೋಕ ಹೊರಳಿದೆ
ಜೀವತಳೆದು

೧೧.
ಈಗಷ್ಟೇ
ಅರಳಿ ಮೆಲ್ಲಗೆ ನಗುವ ಹೂವೆ
ಇದ್ದಲ್ಲಿಯೇ ಕಣ್ಣ ಹೊರಳಿಸಿ
ದಾರಿಹೋಕ ನನ್ನ ಸೆಳೆದುಕೊಂಡೆ

ನನ್ನ ಪುಟ್ಟ ರೆಕ್ಕೆಗಳು
ನಿನ್ನ
ಮಧುರ ಸ್ಪರ್ಶಕ್ಕೆ ಅಲೆದಲೆದು
ದೇಹದಿಂದ ಹೊರಗೆ ಜಿಗಿದಂತೆ
ಅಂಕೆ ಮೀರುತ್ತಿವೆ

ರಕ್ತ ಮಾಂಸದ ದೇಹದುದ್ದಗಲಕ್ಕೂ
ನಿನ್ನ ಇರಿಸಿಕೊಂಡು ಉಸಿರಾಡುವುದು
ಸಂಜೆ, ಬೆಳಗು
ಕಡುಗಪ್ಪಿನ ಕತ್ತಲನು
ದಾಟುವುದು ದುರಭ್ಯಾಸವೀಗ

ಹಾರು ಹೂವೆ
ಗಾಳಿಯಲಿ ತೇಲು
ಅಲೆ ಅಲೆಯುತಾ ಹಗುರಾಗು
ನನ್ನ ರೆಕ್ಕೆಗಳಿಗೂ ಮೆತ್ತು ಬಾ
ನಿನ್ನ ಮಧುರ ಪಕಳೆಯ ರಂಗನು
ಸೇರುವಾ ಬಾ
ಕನಸ್ಸಿನ ಕಣ್ಣು

‍ಲೇಖಕರು Admin

July 16, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: