ಸ್ಪರ್ಶ ಮಾಂತ್ರಿಕರು

ಶಿವಕುಮಾರ ಮಾವಲಿ  

ಎಲ್ಲರೂ ಸಿದ್ಧರಾಗಿ. ಬರುತ್ತಾರೆ
ಸ್ಪರ್ಶ ಮಾಂತ್ರಿಕರು
ದೂರದ ದೇಶದಿಂದ ಬಂದು
ನಿಮ್ಮನ್ನು ಮುಟ್ಟಿ ,ಮಾಯ ಮಾಡಿಬಿಡುತ್ತಾರೆ
ನಿಮ್ಮೆಲ್ಲ ರೋಗ -ರುಜಿನಗಳನ್ನು …

ಹೊರಗಿನಿಂದ ಬಂದವರಷ್ಟೇ ಅಲ್ಲ
ನಮ್ಮಲ್ಲಿಯೂ ಈ “ಮುಟ್ಟಿ -ಮಾಯ ಮಾಡುವ”
ಮಂದಿ ಸಾಕಷ್ಟಿದ್ದಾರೆ .
ಮುಟ್ಟಿ ಯಡವಟ್ಟು ಮಾಡಿಕೊಂಡವರೂ
ಅಲ್ಲಲ್ಲಿ ಸಿಗುತ್ತಾರೆ ,ಸಿಕ್ಕಿಕೊಳ್ಳುತ್ತಲೇ ಇದ್ದಾರೆ .

“ಲಕ್ಷಗಟ್ಟಲೆ ಜನಕ್ಕೆ ಒಮ್ಮೆಲೇ ಮುಟ್ಟಿ
ರೋಗವೆಲ್ಲ ಮಾಯ ಮಾಡಿಬಿಡುತ್ತೇವೆ ” ಎನ್ನುತ್ತಾರೆ ಅವರು .
“ಯಾವ ಪವಡವೂ ಇಲ್ಲ ,ಇದೆಲ್ಲ
ಮತಾಂತರದ ಹಿಂದಿನ ಹುನ್ನಾರ” ಟೀಕಿಸುತ್ತಾರೆ ನಮ್ಮವರು
ಮರೆತಂತೆ ಇಲ್ಲಿಯೇ ಇರುವ ‘ಬಾಬಾ’ ಗಳನ್ನು .

ಈಗಿಂದೀಗಲೇ ಮುಚ್ಚಿಬಿಡೋಣ ಎಲ್ಲ ದವಾಖನೆಗಳನ್ನು
ಅಟ್ಟಿ ಬಿಡೋಣ ಎಲ್ಲ ರೋಗಿಗಳನ್ನು
ಒಂದೇ ಮೂಟೆಯಲ್ಲಿ ಕಟ್ಟಿ ಇವರ ‘ಪವಾಡ ಕಾರ್ಖಾನೆಗಳಿಗೆ ‘.
ಗುಣಪಡಿಸುವರು ಈ ಸ್ಪರ್ಶ- ಮಾಂತ್ರಿಕರು .

ಇಡೀ ದೇಶಕ್ಕಂಟಿದ ಇಂಥ
ಮೂರ್ಛೆ ರೋಗಗಳನ್ನು ಗುಣಪಡಿಸಲು
ಇನ್ಯಾವ ಮಾಂತ್ರಿಕರು ಬರಬೇಕೋ ???

(ಬೆನ್ನಿಹಿನ್ ಭಾರತಕ್ಕೆ ಬರುವ ವಿವಾದದ ಕುರಿತು ಬರೆದ ಕವನ..)

‍ಲೇಖಕರು avadhi

December 27, 2018

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: