ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸುಳಿವ ಗಾಳಿ ಸುಂಟರಗಾಳಿಯಾದರೂ..

Dr.Khade Prakash-PP

ಡಾ. ಪ್ರಕಾಶ ಗ ಖಾಡೆ, ಬಾಗಲಕೋಟ

ಮುಗಿಲ ಸೂರ್ಯನ ಬೆಳಕು
ಎಷ್ಟಿದ್ದರೇನು,
ಕತ್ತಲ ಬದುಕಿಗೆ ಬೆಳಕಾದವರು
ಅಂಬೇಡ್ಕರ್.

ಸುಳಿವ ಗಾಳಿಯೂ
ಸುಂಟರಗಾಳಿಯಾದರೂ
ಬದುಕ ಕನಸಿಗೆ ಗಟ್ಟಿ ನೆಲೆಯಾದವರು
ಅಂಬೇಡ್ಕರ್.

ಅಲೆಯ ಸೊಗಸಿನ ಸಾಗರವೂ
ಉಪ್ಪು ನೀರಾದರೂ
ಬದುಕ ರುಚಿಗೆ ಸಿಹಿಯಾದವರು
ಅಂಬೇಡ್ಕರ್,

ಮೈದುಂಬಿಕೊಂಡ ನದಿ ನದಗಳು
ಬತ್ತಿ ಬರಡಾದರೂ
ಬದುಕ ಹಸಿರಿಗೆ ಜೀವ ಜಲವಾದವರು
ಅಂಬೇಡ್ಕರ್.

 

‍ಲೇಖಕರು admin

14 April, 2016

1 Comment

  1. ಸಾವಿತ್ರಿ ವೆಂ ಹಟ್ಟಿ

    ಚೆಂದದ ಕವನ ಸರ್..

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading