ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸುಡಲಿ ಬಿಡು

-ಎಂ ಬಿ ಶ್ರೀನಿವಾಸ ಗೌಡ

ನೀನು ಹಚ್ಚಿದ ಕಿಚ್ಚು

ಎದೆಯ ಒಡಲೊಳಗೆ ಸುಡುತಿರುವ

ನೋವು.

ನೀನು ಹುಟ್ಟಿಸಿದ ಮೋಹಕ್ಕೆ ಸಿಕ್ಕ

ಒಡಲಿಗೆ ನಿಟ್ಟುಸಿರ

ಭಾಗ್ಯ.

ನೀನು ಕೊಟ್ಟ ಮುತ್ತು

ಎದೆಯ ಕಾವಲಿ ಒಳಗೆ

ಹೂತಿಟ್ಟ ರಕ್ತದ

ಬೀಜ.

ನಿನ್ನ ನೆನಪುಗಳೆಲ್ಲ

ಬರದ ಭಾಗ್ಯವ ನೆನೆದು

ಮರುಗುವ

ಮುಳ್ಳು.

ನಿನ್ನ ಮಾಯದ ಮೋಡಿಗೆ

ಸಿಕ್ಕ ಜೀವಕ್ಕೆ, ನದಿಯ ಸುಳಿಗೆ

ಸಿಕ್ಕು ನಾಶವಾದ

ಭಾವ.

ನಿನ್ನ ನೆನಪುಗಳೆಲ್ಲ

ಎದೆಯೊಳಗೆ

ಕೆಂಪು ಕೆಂಪಾಗಿ

ರಕ್ತ ಸ್ತ್ರಾವ.

ನೀನೆ ಕಳಿಸಿದ್ದ ಪ್ರೀತಿಯ ಹಾಡಿಗೆ

ಯಾಕೆ ಬರಲಿಲ್ಲ

ಹೂ ಬಿಡುವ

ಕಾಲ.

ನಾವು ನಿಲ್ಲುತ್ತಿದ್ದ

ಕಾನನದ ಮರ ಕೂಡ

ಸತ್ತು ಹೋದ ಸುದ್ದಿ

ನಿನ್ನವರೆಗೂ

ಬಂತಾ.

ಇರಲಿ ಇರಲಿ ಬಿಡು

ಸುಡಲಿ ಸುಡಲಿ ಬಿಡು

ನನ್ನ ಬದುಕ ದಾರಿಯ ಗುಂಟಾ

ಕೆಂಡ.

‍ಲೇಖಕರು avadhi

12 April, 2010

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading