’ಸಿಜಿಕೆ, ನೀವೊಂದು ಶುದ್ಧ ಕವಿತೆಯ ಹಾಗೆ..’, ಉಗಮ ಶ್ರೀನಿವಾಸ್ ಕವನ


ಸಿಜಿಕೆ…….
ನೀವೊಂದು ಶುದ್ಧ ಕವಿತೆಯ ಹಾಗೆ!
ಬೆಟ್ಟವನ್ನು ಕರಗಿಸಬಲ್ಲಿರಿ
ಒಂದೆಸಳ ಹುಲ್ಲಲ್ಲೂ
ಉದ್ಯಾನವನ ಬೆಳೆಸಬಲ್ಲಿರಿ.
 
ನೀವೊಂದು ಪ್ರತಿಮೆ!
ಕಡೆದಿಟ್ಟ ಶಿಲೆಯ ಮೇಲೆ ಕೂತ
ಹಕ್ಕಿಯನ್ನು ಮಾತಿಗೆಳೆಯುವಿರಿ.
 
ನೀವೊಂದು ಬತ್ತದ ನದಿ
ಹರಿಯುವ ನದಿಗೆ
ಮೈಯೆಲ್ಲಾ ಕಾಲು ಎನ್ನುವ ಹಾಗೆ
ನುಗ್ಗುತ್ತಲೇ ಇದ್ದಿರಿ
ದಣಿವಿಲ್ಲದಂತೆ.
 
ನೀವೊಂದು ಬೇರು ಬಿಟ್ಟ ಮರ
ಗೂಡು ಕಟ್ಟುವ ಹಕ್ಕಿಗಳಿಗೆ
ಜಾಗ ಕೊಟ್ಟಿರಿ
ದಾರಿ ಹೋಕರಿಗೆ ನೆರಳು ಕೊಟ್ಟಿರಿ.
 
ನೀವೊಬ್ಬ ಪವಾಡ ಪುರುಷ
ಮಾಯಾವಿ ಮಾಡದ್ದನ್ನು
ಜಾದೂಗಾರನಿಗೆ ಕೈಗೆಟುಕದ್ದನ್ನು
ಮಾಡಿ ತೋರಿಸಿದಿರಿ.
 
ನೀವೊಬ್ಬ ಸಂತ,
ಸ್ವಂತಕ್ಕಲ್ಲ
ಖಾವಿ ತೊಡದೆ
ಕಲ್ಯಾಣ ಕಟ್ಟಿದಿರಿ!
 

‍ಲೇಖಕರು G

January 17, 2014

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

  1. D.Ravivarma

    ನೀವೊಬ್ಬ ಪವಾಡ ಪುರುಷ
    ಮಾಯಾವಿ ಮಾಡದ್ದನ್ನು
    ಜಾದೂಗಾರನಿಗೆ ಕೈಗೆಟುಕದ್ದನ್ನು
    ಮಾಡಿ ತೋರಿಸಿದಿರಿ.
    ನೀವೊಬ್ಬ ಸಂತ,
    ಸ್ವಂತಕ್ಕಲ್ಲ
    ಖಾವಿ ತೊಡದೆ
    ಕಲ್ಯಾಣ ಕಟ್ಟಿದಿರಿ!..ci,ji,ke yaava shabdakku sigada ondu dodda chaitanya shakti…aadaru kavite arthapurnavaagide…

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: