ಸಿಜಿಕೆ…….
ನೀವೊಂದು ಶುದ್ಧ ಕವಿತೆಯ ಹಾಗೆ!
ಬೆಟ್ಟವನ್ನು ಕರಗಿಸಬಲ್ಲಿರಿ
ಒಂದೆಸಳ ಹುಲ್ಲಲ್ಲೂ
ಉದ್ಯಾನವನ ಬೆಳೆಸಬಲ್ಲಿರಿ.
ನೀವೊಂದು ಪ್ರತಿಮೆ!
ಕಡೆದಿಟ್ಟ ಶಿಲೆಯ ಮೇಲೆ ಕೂತ
ಹಕ್ಕಿಯನ್ನು ಮಾತಿಗೆಳೆಯುವಿರಿ.
ನೀವೊಂದು ಬತ್ತದ ನದಿ
ಹರಿಯುವ ನದಿಗೆ
ಮೈಯೆಲ್ಲಾ ಕಾಲು ಎನ್ನುವ ಹಾಗೆ
ನುಗ್ಗುತ್ತಲೇ ಇದ್ದಿರಿ
ದಣಿವಿಲ್ಲದಂತೆ.
ನೀವೊಂದು ಬೇರು ಬಿಟ್ಟ ಮರ
ಗೂಡು ಕಟ್ಟುವ ಹಕ್ಕಿಗಳಿಗೆ
ಜಾಗ ಕೊಟ್ಟಿರಿ
ದಾರಿ ಹೋಕರಿಗೆ ನೆರಳು ಕೊಟ್ಟಿರಿ.
ನೀವೊಬ್ಬ ಪವಾಡ ಪುರುಷ
ಮಾಯಾವಿ ಮಾಡದ್ದನ್ನು
ಜಾದೂಗಾರನಿಗೆ ಕೈಗೆಟುಕದ್ದನ್ನು
ಮಾಡಿ ತೋರಿಸಿದಿರಿ.
ನೀವೊಬ್ಬ ಸಂತ,
ಸ್ವಂತಕ್ಕಲ್ಲ
ಖಾವಿ ತೊಡದೆ
ಕಲ್ಯಾಣ ಕಟ್ಟಿದಿರಿ!
ನೀವೊಬ್ಬ ಪವಾಡ ಪುರುಷ
ಮಾಯಾವಿ ಮಾಡದ್ದನ್ನು
ಜಾದೂಗಾರನಿಗೆ ಕೈಗೆಟುಕದ್ದನ್ನು
ಮಾಡಿ ತೋರಿಸಿದಿರಿ.
ನೀವೊಬ್ಬ ಸಂತ,
ಸ್ವಂತಕ್ಕಲ್ಲ
ಖಾವಿ ತೊಡದೆ
ಕಲ್ಯಾಣ ಕಟ್ಟಿದಿರಿ!..ci,ji,ke yaava shabdakku sigada ondu dodda chaitanya shakti…aadaru kavite arthapurnavaagide…
uttama kaviteyondige namma namana..