ಸವಿತಾ ನಾಗಭೂಷಣ ಕವಿತೆ- ತಿಳಿದಂತೆ ಮಾಡು…

ಸವಿತಾ ನಾಗಭೂಷಣ

ಎಷ್ಟು ತಗ್ಗಬೇಕು ಎಷ್ಟು ಬಗ್ಗಬೇಕು
ಅವರೇ ಹೇಳುತ್ತಾರೆ…

ಎಷ್ಟು ಕುಗ್ಗಬೇಕು ಎಷ್ಟು ಹಿಗ್ಗಬೇಕು
ಅವರೇ ಹೇಳುತ್ತಾರೇ…

ಏನು ನೋಡಬೇಕು ಏನು ನುಡಿಯಬೇಕು
ಅವರೇ ಹೇಳುತ್ತಾರೆ….

ಏನು ಉಣ್ಣಬೇಕು ಏನು ತೊಡಬೇಕು?
ಅವರೇ ಹೇಳುತ್ತಾರೆ….

ಯಾರ ಕೂಡಬೇಕು ಎಷ್ಟು ಹಡೆಯಬೇಕು
ಅವರೇ ಹೇಳುತ್ತಾರೆ…

ಹೇಗೆ ಬೊಗಳಬೇಕು ಯಾರ ಸಿಗಿಯಬೇಕು
ಅವರೇ ಹೇಳುತ್ತಾರೆ…

ಏನ ಪೂಜಿಸಬೇಕು ಏನ ಭಂಜಿಸಬೇಕು?
ಅವರೇ ಹೇಳುತ್ತಾರೆ….

ಏನ ಖಂಡಿಸಬೇಕು?
ಯಾರದಂಡಿಸಬೇಕು?
ಅವರೇ ಹೇಳುತ್ತಾರೆ

ನೀನೊಂದು ಗೊಂಬೆ….
ಒಪ್ಪಿದರೆ ದೇವತೆ ಸಿಡಿದರೆ ರಕ್ಕಸಿ!
ಪಾಲಿಸಿದರೆ ಪಾಲು
ಸೋಲಿಸಿದರೆ ಕೋಲು!

ತಂಗಿ…
ತಿಳಿದಂತೆ ಮಾಡು….
ಹೊಳೆದಂತೆ ಹಾಡು….
ನಡೆದಂತೆ ಜಾಡು …
ಇರದಿರಲಿ ಸೇಡು-ಕೇಡು !

‍ಲೇಖಕರು avadhi

March 10, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: