ಶ್ರೀಮತಿ ಸರಳಾ ರಂಗನಾಥ ರಾವ್ ಸ್ಮಾರಕ ಪ್ರತಿಷ್ಟಾನವು ೨೦೨೨ನೇ ಸಾಲಿನ ಸರಳಾ ರಂಗನಾಥ ರಾವ್ ಪ್ರಶಸ್ತಿಗಾಗಿ ಮಹಿಳೆಯರಿಂದ ಕೃತಿಗಳನ್ನು ಆಹ್ವಾನಿಸುತ್ತಿದೆ.
ಕೃತಿಗಳು ಆತ್ಮಚರಿತ್ರೆ/ಜೀವನ ಚರಿತ್ರೆ ಸಾಹಿತ್ಯ ಪ್ರಕಾರಕ್ಕೆ ಸೇರಿರಬೇಕು.
ಈ ಕೃತಿಗಳು ೨೦೨೨ ರ ಜನವರಿಯಿಂದ ಡಿಸೆಂಬರ್ ಒಳಗೆ ಪ್ರಕಟವಾಗಿರಬೇಕು.
ಇದು ಲೇಖಕಿಯರಿಗೆ ಸೀಮಿತವಾದ ಪ್ರಶಸ್ತಿ. ಆಸಕ್ತ ಲೇಖಕಿಯರು ತಮ್ಮ ಕೃತಿಗಳ ಮೂರು ಪ್ರತಿಗಳನ್ನು ಸೆಪ್ಟಂಬರ್ ೩೦ರೊಳಗೆ ಈ ಕೆಳಗಿನ ವಿಳಾಸಕ್ಕೆ ಕಳುಹಿಸಬೇಕು:
ಜಿ.ಎನ್.ರಂಗನಾಥ ರಾವ್,
ಕಾರ್ಯಾಧ್ಯಕ್ಷರು,
ಶ್ರೀಮತಿ ಸರಳಾ ರಂಗನಾಥ ರಾವ್ ಸ್ಮಾರಕ ಪ್ರತಿಷ್ಠನ,
ನಂ.೨೬೬, `ಸ್ನೇಹ’,೩ನೇ ಮೈನ್ ರಸ್ತೆ, ೮ನೇ ಬ್ಲಾಕ್,
ಕೋರಮಂಗಲ, ಬೆಂಗಳೂರು-೫೬೦೦೦೯೫.
ಫೋನ್:೬೩೬೨೪೭೩೧೫೧.
ಪ್ರಶಸ್ತಿಯು ರೂ ೧೦,೦೦೦ ನಗದು ಮತ್ತು ಸ್ಮರಣಿಕೆಯನ್ನು ಒಳಗೊಂಡಿರುತ್ತದೆ ಎಂದು ಗೌರವಾಧ್ಯಕ್ಷರಾದ ಡಾ.ಎಚ್.ಎಸ್.ವೆಂಕಟೇಶಮೂರ್ತಿ ಮತ್ತು ಪ್ರಧಾನ ಕಾರ್ಯದಶಿ ತೀರ್ಥ ಜಿ.ಆರ್ ಆರ್ ತಿಳಿಸಿದ್ದಾರೆ..
0 ಪ್ರತಿಕ್ರಿಯೆಗಳು