ಶಶಿಕಾಂತ ಯಡಹಳ್ಳಿ
ಗುಂಡಿಗೆ ಗುಂಡು
ರಕ್ತಕೆ ರಕ್ತ
ಮನುಕುಲ ಚರಿತ್ರೆ
ರಕ್ತಸಿಕ್ತ…
ಬರೀ ಸೇಡಿಗೆ ಸೇಡು
ಕೊಲ್ಲಲು ಸಕಾರಣ ಬೇಕಿಲ್ಲ..
ಯುದ್ದವೆಂಬುದು ಸುಡುಗಾಡು
ಕದನಕೆ ದ್ವೇಷವೇ ಸಾಕಲ್ಲ…
ಗಡಿಗಳ ಆಚೆ ಈಚೆ
ರಣಹದ್ದುಗಳ ಹಾರಾಟ..
ಸಮರವೆಂಬುದೇನಲ್ಲ
ಸಾವಿಗಾಗಿ ಕಾದಾಟ…
ಆಳುವವರಿಗದು
ಯುದ್ದೋನ್ಮಾದ ಭಾವ..
ಯೋಧರ ಮನೆಯಲಿ
ಮಿಡಿಯುತಿವೆ ಜೀವ…
ಮಿತ್ರರೋ ಶತ್ರುವೋ
ಎಲ್ಲರದೊಂದೆ ಪ್ರಾಣ
ಸೋಲೋ ಗೆಲುವೊ
ಸಮಾದಿ ಮೇಲೆ ಶೋಕಗಾನ…
ಅವರೂ ಕೊಂದರು
ಇವರೂ ಕೊಂದರು
ಕೊಂದವರೆಲ್ಲಾ ಕೊಂದಿದ್ದು
ಬೇರೇನಲ್ಲಾ ಮಾನವೀಯತೆ…





0 Comments