ಸತ್ತ ಕನಸುಗಳಿಗೆ ಚೌಕಾಸಿ ಮಾಡೋಣ…

ದೇವರ ದಯೆಯೆಂಬುದಿದ್ದರೆ

ಪ್ರಸನ್ನ ಚಲಂ


ದಾರಿಯಲ್ಲಿ ಮತ್ತೆ ನೀ
ಸಿಗುವಂತಾಗಲಿ
ಮಾರಾಣಾಂತಿಕವಾದ ನಿನ್ನ
ಚೆಲ್ಲು ಚೆಲ್ಲು ನಗೆಯನ್ನು
ನಿನ್ನಾಳದಿಂದ ಕೀಳಬೇಕಿದೆ
ಆಗ ನನ್ನ ಬದುಕಿಗೊಂದು
ಅರ್ಥ ಕಲ್ಪಿಸಿ ಗಂಡಸಾಗುತ್ತೇನೆ
ನನ್ನ ಗಾಂಭೀರ್ಯವನು
ನಿನ್ನ ಬಸಿರಲಿ ಧರಿಸಿ
ನೀನೂ ಸಹ ಹೆಂಗಸಾಗಿಬಿಡು
ಒಂದಷ್ಟು ವಿಷಾದಗಳನ್ನು
ಹುಟ್ಟಿಸುತ್ತಾ ಇದ್ದು ಬಿಡೋಣ
ದೇವರ ದಯೆಯೆಂಬುದಿದ್ದರೇ
ಕನಸುಗಳು ಬೀಳದಿರಲಿ
ಯಾರ ದರದೂ ಇಲ್ಲದೇ
ಬದುಕುವುದು ಅಪರಾದವಾಗಿರುವಾಗ
ನಗುನಗುತ್ತಾ ಕೈ ಕೈ ಹಿಡಿದು
ನಡೆಯುವುದು ಬೇಡ
ಚಿಲ್ಲರೆ ಅಂಗಡಿಯನ್ನಿಟ್ಟು
ಸತ್ತ ಕನಸುಗಳಿಗೆ
ಚೌಕಾಸಿ ಮಾಡೋಣ
ಭಾವನೆಗಳು ಬೇಡ
ಅವು ಮತ್ತೆ ಬದುಕಿಸಿ ಬಿಡಬಹುದು
ಇನ್ನೂ ದೇವರಿಗೆ ದಯೆಯೆಂಬುದಿದ್ದಾರೆ
ನೀನು ಬಂಜೆಯಾಗಿ ಬಿಡು
ನಾನು ಷಂಡನಾಗುತ್ತೇನೆ
ಸಪ್ಪೆ ಮೋರೆಯ ಸತ್ತ ಮುಖ ಹೊತ್ತು
ಒಂದೇ ಹಾಸಿಗೆಯಲ್ಲಿರೋಣ
ಅವರಿವರ ಉದ್ದೇಶಗಳ
ಹೊತ್ತು ಪೋಷಿಸುವುದರಿಂದ
ತಪ್ಪಿಸಿಕೊಳ್ಳ ಬಹುದು
ಹೀಗೆ ದಿಕ್ಕೆಟ್ಟವರಂತೆ
ಬದುಕಿ ಬಡೋಣ…. ಅವರೊಟ್ಟಿಗೆ
ದಯೆಯಿಂದ ದೇವರಿಗೂ ಖುಷಿಯಾಗ ಬಹುದು.

‍ಲೇಖಕರು avadhi

April 23, 2013

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

5 ಪ್ರತಿಕ್ರಿಯೆಗಳು

  1. ವಿದ್ಯಾ.ಕುಂದರಗಿ.

    ಎಂಥ ಅಗಮ್ಯದ ಅಭಿವ್ಯಕ್ತಿ….ಎಂಥ ಅದಮ್ಯ ರೋಷ ಎಂಥ ಹತಾಶೆಗೆ ತಂದು ನಿಲ್ಲಿಸಿದ ಪರಿ …..ಅದ್ಭುತವಾಗಿದೆ ಕವಿತೆ

    ಪ್ರತಿಕ್ರಿಯೆ
  2. ವಿದ್ಯಾ.ಕುಂದರಗಿ.

    ಆ ದೇವರಿಗೆ ದಯೆಯೆಂಬುದು ಬಾರದಂತಾಗಲಿ…….

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: