ಸತೀಶ ಕುಲಕರ್ಣಿ ಓದಿದ ‘ಮಾಧವ ಕೌಶಿಕ್ ಕವಿತೆಗಳು’

ಸತೀಶ ಕುಲಕರ್ಣಿ

ಹಿಂದಿಯ ಪ್ರಸಿದ್ಧ ಕವಿ ಮಾಧವ ಕೌಶಿಕ್‌ರ ೪೫ ಕವಿತೆಗಳನ್ನು ಶ್ರೀಮತಿ ಸುಮಾ ಕಾಟ್ಕರ್ ಕನ್ನಡಕ್ಕೆ ತಂದ ಸಹಜ ಕವಿತೆಗಳಿವು. ತುಂಬ ಸರಳ ಭಾವ, ಲಯ ಪ್ರಾಪ್ತಿಯಾಗುವಂತೆ ಅನುವಾದಿಸಿದ್ದಾರೆ. ಕೌಶಿಕ್ ರ ಕಾವ್ಯ ಭಾಷೆ ತುಂಬ ಸರಳ ತರಲುವಾದುದು. ಕೋವಿಡ್ ಭಾರತದ ಆರದ ಕಣ್‌ತೇವ ಚಿತ್ರಗಳಿಗೆ ಮನುಷ್ಯ ಮತ್ತು ಯುಗ ಪರಿವರ್ತನೆಯ ಸಂಜ್ಞೆಗಳನ್ನು ಕವಿತೆ ಚಿತ್ರಿಸಿವೆ. ಮನುಷ್ಯ ಮತ್ತು ಮನುಷ್ಯತ್ವವೇ ಇಲ್ಲಿನ ಶಕ್ತಿ.

ಸ್ವಾತಂತ್ರ್ಯ ದಿನದಂದು ಹೋರಿ ಕೇಳುತ್ತಿದ್ದಾನೆ ಸ್ವಾತಂತ್ರ್ಯನಾಗಿರುವನೇನು ನಾನು ? ಹೋರಿ ಹೆಸರಿನ ಒಬ್ಬ ರೈತ ಕೇಳುವ ಪ್ರಶ್ನೆ ನಮ್ಮದೆಲ್ಲರದಾಗುತ್ತದೆ. ನಿರಾಶ್ರಿತನೊಬ್ಬ ‘ಜಗಕ್ಕೆ ಪ್ರಶ್ನೆ – ಮುಗಿಯುತ್ತಲೇ ಇಲ್ಲೊ ಈ ಪಯಣ ?’ (ಲಾಕ್ ಡೌನ್ )

ಗಾಳಿ ಬಿರುಗಾಳಿ ಮಿಂಚು ಸಿಡಿಲು ಬಿಸಿಲು ನೆರಳು ಮಳೆ ಮುಗಿಲು ನಿಸರ್ಗದ ಈ ಎಲ್ಲ ಬಣ್ಣಗಳು ಜೀವನದ ಪ್ರತಿಬಿಂಬಗಳು ಪ್ರಕೃತಿ ಪುರುಷ ಎಂಬ ಕವಿತೆಯ ಸಾಲುಗಳು ಜೀವ ಭಾವಕ್ಕೆ ಹೊಂದಿಕೊಂಡು ಬರೆದವು. ಮಕ್ಕಳ ಕಣ್ಣುಗಳಿಂದ ನೋಡಿ : ಜಗತ್ತು ಅದೆಷ್ಟು ಸುಂದರವಾಗಿದೆ ಎಂಬ ಸಾಲುಗಳಾಗಲಿ, ಶಬ್ದಗಳ ಶಕ್ತಿಯ ಎದುರು ದೇವರೂ ತಲೆ ಬಾಗುತ್ತಾನೆ – ಈ ಪಂಕ್ತಿಗಳು ಸೆರೆ ಹಿಡಿಯತ್ತವೆ.

ನೀರಿನಲ್ಲಿ ನೀರಿನಂತಿರಬೇಕು ಶಬ್ದದಲ್ಲಿ ಅರ್ಥದಂತಿರಬೇಕು ಲಾಭದಲ್ಲಿ ಹಾನಿಯಂತಿರಬೇಕು ಇವೆಲ್ಲ ಓದುತ್ತ ಹೋದಂತೆ ನಮ್ಮವೇ ಅನ್ನಿಸುತ್ತವೆ. ಮನುಷ್ಯ ಸ್ವಭಾವ, ಕಾಲ ಪರಿವರ್ತನೆಯ ಸಂಜ್ಞೆ ಇವೆಲ್ಲೆ ಕೌಶಿಕ್ಕಾ ವ್ಯದ ಕಾಯಾಂತರಗಳು. ಕನ್ನಡದ್ದವೇ ಎನ್ನುವಷ್ಟರಮಟ್ಟಿಗೆ ಅನುವಾದವಾಗಿವೆ.

‍ಲೇಖಕರು avadhi

February 17, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: