ಸತೀಶ ಕುಲಕರ್ಣಿ
ಹಿಂದಿಯ ಪ್ರಸಿದ್ಧ ಕವಿ ಮಾಧವ ಕೌಶಿಕ್ರ ೪೫ ಕವಿತೆಗಳನ್ನು ಶ್ರೀಮತಿ ಸುಮಾ ಕಾಟ್ಕರ್ ಕನ್ನಡಕ್ಕೆ ತಂದ ಸಹಜ ಕವಿತೆಗಳಿವು. ತುಂಬ ಸರಳ ಭಾವ, ಲಯ ಪ್ರಾಪ್ತಿಯಾಗುವಂತೆ ಅನುವಾದಿಸಿದ್ದಾರೆ. ಕೌಶಿಕ್ ರ ಕಾವ್ಯ ಭಾಷೆ ತುಂಬ ಸರಳ ತರಲುವಾದುದು. ಕೋವಿಡ್ ಭಾರತದ ಆರದ ಕಣ್ತೇವ ಚಿತ್ರಗಳಿಗೆ ಮನುಷ್ಯ ಮತ್ತು ಯುಗ ಪರಿವರ್ತನೆಯ ಸಂಜ್ಞೆಗಳನ್ನು ಕವಿತೆ ಚಿತ್ರಿಸಿವೆ. ಮನುಷ್ಯ ಮತ್ತು ಮನುಷ್ಯತ್ವವೇ ಇಲ್ಲಿನ ಶಕ್ತಿ.
ಸ್ವಾತಂತ್ರ್ಯ ದಿನದಂದು ಹೋರಿ ಕೇಳುತ್ತಿದ್ದಾನೆ ಸ್ವಾತಂತ್ರ್ಯನಾಗಿರುವನೇನು ನಾನು ? ಹೋರಿ ಹೆಸರಿನ ಒಬ್ಬ ರೈತ ಕೇಳುವ ಪ್ರಶ್ನೆ ನಮ್ಮದೆಲ್ಲರದಾಗುತ್ತದೆ. ನಿರಾಶ್ರಿತನೊಬ್ಬ ‘ಜಗಕ್ಕೆ ಪ್ರಶ್ನೆ – ಮುಗಿಯುತ್ತಲೇ ಇಲ್ಲೊ ಈ ಪಯಣ ?’ (ಲಾಕ್ ಡೌನ್ )
ಗಾಳಿ ಬಿರುಗಾಳಿ ಮಿಂಚು ಸಿಡಿಲು ಬಿಸಿಲು ನೆರಳು ಮಳೆ ಮುಗಿಲು ನಿಸರ್ಗದ ಈ ಎಲ್ಲ ಬಣ್ಣಗಳು ಜೀವನದ ಪ್ರತಿಬಿಂಬಗಳು ಪ್ರಕೃತಿ ಪುರುಷ ಎಂಬ ಕವಿತೆಯ ಸಾಲುಗಳು ಜೀವ ಭಾವಕ್ಕೆ ಹೊಂದಿಕೊಂಡು ಬರೆದವು. ಮಕ್ಕಳ ಕಣ್ಣುಗಳಿಂದ ನೋಡಿ : ಜಗತ್ತು ಅದೆಷ್ಟು ಸುಂದರವಾಗಿದೆ ಎಂಬ ಸಾಲುಗಳಾಗಲಿ, ಶಬ್ದಗಳ ಶಕ್ತಿಯ ಎದುರು ದೇವರೂ ತಲೆ ಬಾಗುತ್ತಾನೆ – ಈ ಪಂಕ್ತಿಗಳು ಸೆರೆ ಹಿಡಿಯತ್ತವೆ.
ನೀರಿನಲ್ಲಿ ನೀರಿನಂತಿರಬೇಕು ಶಬ್ದದಲ್ಲಿ ಅರ್ಥದಂತಿರಬೇಕು ಲಾಭದಲ್ಲಿ ಹಾನಿಯಂತಿರಬೇಕು ಇವೆಲ್ಲ ಓದುತ್ತ ಹೋದಂತೆ ನಮ್ಮವೇ ಅನ್ನಿಸುತ್ತವೆ. ಮನುಷ್ಯ ಸ್ವಭಾವ, ಕಾಲ ಪರಿವರ್ತನೆಯ ಸಂಜ್ಞೆ ಇವೆಲ್ಲೆ ಕೌಶಿಕ್ಕಾ ವ್ಯದ ಕಾಯಾಂತರಗಳು. ಕನ್ನಡದ್ದವೇ ಎನ್ನುವಷ್ಟರಮಟ್ಟಿಗೆ ಅನುವಾದವಾಗಿವೆ.
0 ಪ್ರತಿಕ್ರಿಯೆಗಳು