ಶ್ರೀಮತಿ ಸರಳಾ ರಂಗನಾಥ ರಾವ್ ಸ್ಮಾರಕ ಪ್ರತಿಷ್ಠಾನಕ್ಕೆ ಆಹ್ವಾನ…

ಶ್ರೀಮತಿ ಸರಳಾ ರಂಗನಾಥ ರಾವ್ ಸ್ಮಾರಕ ಪ್ರತಿಷ್ಠಾನ, ಸಾಹಿತ್ಯ, ಕಲೆಗಳಲ್ಲಿ ಮಹಿಳೆಯರನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಜನ್ಮತಾಳಿರುವ ಒಂದು ಪುಟ್ಟ ಸಾಂಸ್ಕೃತಿಕ ಸಂಸ್ಥೆ. ಲೇಖಕಿಯರ ಪ್ರಕಟಿತ ಕೃತಿಗೆ, ಕನ್ನಡ ಅಧ್ಯಾಪಕಿ, ಸಾಹಿತ್ಯ ಪ್ರೇಮಿಯಾಗಿದ್ದ ಶ್ರೀಮತಿ ಸರಳಾ ರಂಗನಾಥ ರಾವ್ ಅವರ ಹೆಸರಿನಲ್ಲಿ ಪ್ರತಿ ವರ್ಷ ಲೇಖಕಿ ಒಬ್ಬರಿಗೆ ಪ್ರಶಸ್ತಿಯೊಂದನ್ನು ನೀಡುವ ಯೋಜನೆಯನ್ನು ಪ್ರತಿಷ್ಠಾನ ಹಮ್ಮಿಕೊಂಡಿದೆ.

ಪ್ರಶಸ್ತಿಯು ಹತ್ತು ಸಾವಿರ ರೂಪಾಯಿ ನಗದು, ಶಾಲು ಮತ್ತು ಸ್ಮರಣ ಫಲಕಗಳನ್ನು ಒಳಗೊಂಡಿರುತ್ತದೆ. ೨೦೨೧ನೇ ಸಾಲಿನ ಪ್ರಶಸ್ತಿಗಾಗಿ, ೨೦೨೧ರ ಜನವರಿಯಿಂದ ಆ ವರ್ಷದ ಡಿಸೆಂಬರ್ ನಡುವಣ ಅವಧಿಯಲ್ಲಿ ಪ್ರಕಟವಾದ ಕಾದಂಬರಿಯನ್ನು ಲೇಖಕಿಯರು ಕಳುಹಿಸಬಹುದಾಗಿದೆ. ಕಾದಂಬರಿಯ ಮೂರು ಪ್ರತಿಗಳನ್ನು ಈ ಕೆಳಗಿನ ವಿಳಾಸಕ್ಕೆ ಸೆಪ್ಟಂಬರ್ ೨೦ರೊಳಗೆ ಕಳುಹಿಸತಕ್ಕದ್ದು.

ಜಿ.ಎನ್.ರಂಗನಾಥ ರಾವ್, ಕಾರ್ಯಾಧ್ಯಕ್ಷರು, ಶ್ರೀಮತಿ ಸರಳಾ ರಂಗನಾಥ ರಾವ್ ಸ್ಮಾರಕ ಪ್ರತಿಷ್ಠಾನ, ನೊ.೨೬೬, `ಸ್ನೇಹ’; ೩ನೇ ಮೈನ್, ೮ನೇ ಬ್ಲಾಕ್,ಕೋರಮಂಗಲ, ಬೆಂಗಳೂರು-೫೬೦೦೯೫. ಫೋನ್: ೨೫೭೦೧೧೬೫/೬೩೬೨೪೭೩೧೫೧.

ತೀರ್ಪುಗಾರರ ಸಮಿತಿಯ ನಿರ್ಣಯವೇ ಆಖೈರು.ಈ ಸಂಬ೦ಧ ಪತ್ರ ವ್ಯವಹಾರಕ್ಕೆ ಅವಕಾಶವಿಲ್ಲ.

‍ಲೇಖಕರು Admin

September 2, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: