ರಾಜಾರಾಂ ತಲ್ಲೂರ್
ಉಡುಪಿ ಯಕ್ಷಗಾನ ಕಲಾರಂಗದವರು ಬಿಳಿಮಲೆಯವರಿಗೆ ಪ್ರಶಸ್ತಿ ನೀಡುವುದಕ್ಕಾಗಿ ಆಯೋಜಿಸಿದ್ದ ಸಮಾರಂಭಕ್ಕೆ ಹೋಗಿಬಂದೆ.
ನನಗೆ ಅತ್ಯಂತ ಸಮಾಧಾನ ಮತ್ತು ಖುಷಿ ಕೊಟ್ಟ ಸಂಗತಿಗಳೆಂದರೆ ಗೆಳೆಯ ಶ್ರೀನಿವಾಸ ಕಾರ್ಕಳ ಅವರು 19 ವರ್ಷಗಳ ಸುದೀರ್ಘ ಅವಧಿಯ ಬಳಿಕ ಮೊದಲ ಬಾರಿಗೆ ಸಾರ್ವಜನಿಕ ಬದುಕಿಗೆ ತೆರೆದುಕೊಂಡು, ವೇದಿಕೆಯೇರಿ ತನ್ನ ಬಂಧು ಪುರುಷೋತ್ತಮ ಬಿಳಿಮಲೆಯವರ ಬಗ್ಗೆ ಮಾತನಾಡಿದ್ದು.
ಜೊತೆಗೆ ಶ್ರೀನಿವಾಸ್ ಪತ್ನಿ ಗುಲಾಬಿ ಬಿಳಿಮಲೆ ಕೂಡ ತನ್ನಣ್ಣನ ಬಗ್ಗೆ ಬಹಳ ಆಪ್ತವಾಗಿ ಮಾತನಾಡಿದ್ದು.
Great ,good to see them together as always
ಒಂದಿಷ್ಟಾದರೂ ಮಾತು ನಮಗೆ ಕೇಳಿಸಬಾರದೇ?
– ಶ್ಯಾಮಲಾ
ರಾಜಾರಾಂ ಸರ್, ಶ್ರೀನಿವಾಸ್ ಕಾರ್ಕಳ ವೇದಿಕೆ ಏರುತ್ತಾರೆನ್ನುವ ಸುದ್ದಿಯೇ ಖುಷಿಕೊಟ್ಟಿತ್ತು. ಈಗ ಇಬ್ಬರನ್ನೂ ಜೊತೆಯಲ್ಲಿ ವೇದಿಕೆಯ ಮೇಲೆ ನೋಡಿದಾಗ ಸಂಭ್ರಮವೆನಿಸಿತು. ಇದು ಪುರುಷೋತ್ತಮ ಬಿಳಿಮಲೆಯವರ ಬಗ್ಗೆ ಶ್ರೀನಿವಾಸರಿಗಿರುವ ಆಪ್ತತೆ, ಗೌರವವನ್ನು ತೋರಿಸುತ್ತದೆ. ಈ ದೃಶ್ಯ ನಮಗೆ ಸಿಗಲು ಶಕ್ತಿಯಾದ ಶ್ರೀನಿವಾಸರ ಬೆನ್ನೆಲುಬು ಗೆಳತಿ ಗುಲಾಬಿಗೊಂದು ಹೃತ್ಪೂರ್ವಕ ಸಲಾಮ್.
ಅನುಪಮಾ ಪ್ರಸಾದ್