ಶ್ರೀಧರ ಪತ್ತಾರ ಕವಿತೆ – ಕಾಮನೆಗಳಿಗೆ ಕನಿಕರವಿರಲಿಲ್ಲ..

ಶ್ರೀಧರ ಪತ್ತಾರ

ನೀರವ ರಾತ್ರಿಯಲಿ
ಕೋಣೆಯೊಳಗೊಂದು ಹಣತೆ
ಬೆಳಕು ಸುರಿಸುತಿತ್ತು…

ನಸುನಾಚುತ ಅವಳೆಂದಳು…
ಹೊಕ್ಕುಳಿನಾಳಕ್ಕಿಳಿವ
ನೋವು ತುಂಬ ಹಿತ…
ಈಗ ಅವನೊಳಗಿನ ಉನ್ಮತ್ತ ಕುದುರೆಗಳು
ಹೇಂಕರಿಸಿ ನಾಗಾಲೋಟಕ್ಕಿಳಿದವು
ಕಡಿವಾಣಕ್ಕೆ ಸಿಗದೆ…

ಪ್ರತಿ ಬಾರಿಯೂ ಗೆಲುವಾಗುವವಳ
ಅದೇ ಮಾತು…
ಎದುರಿಗೆ ಬೆಳಕ ಸಂಭ್ರಮದಿ
ನಸುನಗುವ ಅದೇ ಹಣತೆ…

ಈ ಬಾರಿ ದೇಹದ ಕಸುವೆಲ್ಲ
ಒಗ್ಗೂಡಿಸಿ ಉದ್ಗರಿಸಿ ಆಹ್ಲಾದಗೊಂಡವನು ಅವಳ ಮೆಚ್ಚುಗೆಗೆ ಕಾದು ನಿಂತ
ಢಾಳಾಗಿ ಉರಿವ ಹಣತೆ
ಕಣ್ಮುಚ್ಚಿಕೊಂಡಿತು….

ಕಣ್ಣೊರೆಸಿಕೊಳ್ಳುತ್ತ ಅವಳೆಂದಳು…
ಇಂದು ನಿನ್ನ ಕಾಮನೆಗಳಿಗೆ ಕನಿಕರವಿರಲಿಲ್ಲ
ಅಂತೆಯೇ…
ಕತ್ತಲೆಗೆ ಬೆಳಕು ಆಹುತಿಯಾಯ್ತು…

ಅವನಿಗೆ ಪಿಚ್ಚೆನಿಸಿ
ಅವಳೆದುರು ಮಂಡಿಯೂರಿ ಶರಣಾಗತನಾದ
ಕತ್ತಲೆ ಇನ್ನೂ ಗಹಗಹಿಸುತಲೇಯಿತ್ತು.

‍ಲೇಖಕರು avadhi

May 28, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: