ಶ್ರೀದೇವಿ ಕೆರೆಮನೆ ಹೊಸ ಕವಿತೆ- ವಾಸ್ತವ ಅವಾಸ್ತವಗಳ ನಡುವೆ

ಶ್ರೀದೇವಿ ಕೆರೆಮನೆ

ಆಸೆಯಾಗುತ್ತದೆ ಕೆಲಮೊಮ್ಮೆ
ಮಾತಿಲ್ಲದೆ ಹೆಗಲ ಮೇಲೆ
ತೋಳು ಬೀಸಾಡಿ ಎದೆಗೊರಗಬೇಕೆಂದು
ಈಗ ಈ ಆಸೆ ಈಡೇರಲಾರದು
ಎನ್ನುವ ವಾಸ್ತವದ ಅರಿವಿದ್ದಾಗಲೂ

ಕೂದಲು ಕೆದರಿ, ಅಂಗೈ ಸೇರಿಸಿ
ತೋಳು ಜಿಗುಟಿ ಕೆಂಪಾಗಿಸಿ
ಹೆಗಲಿಗೆ ಹಲ್ಲಿನ ಗುರುತು ಮೂಡಿಸಿ
ಹುಸಿ ಮುನಿಸು ತೋರಿ
ಮುದ್ದಿಸಿಕೊಳ್ಳುವ ಮನಸಾಗುತ್ತದೆ
ಅಸಾಧ್ಯವಾದದ್ದು ಈಡೇರಿದರೆ
ಏನಾದೀತು ಎಂಬ ಹುಂಬು ಪ್ರಶ್ನೆಯನ್ನು
ಮನಸು ತನಗೆ ತಾನೇ ಕೇಳಿಕೊಳ್ಳುತ್ತದೆ

ನೀರವ ರಾತ್ರಿಯ ಮೌನದಲಿ
ಯಾರಿಗೂ ಕೇಳದಂತೆ ಆಡಿದ
ಪಿಸುಮಾತುಗಳು ಮರುಕಳಿಸುವ
ಯೋಚನೆಯೇ ಮೈ ನವಿರೇಳಿಸಿ
ಎದೆಕಟ್ಟು ಬಿಗಿಯಾಗಿ
ಮೈ ಮುರಿಯುವಂತಾದಾಗಲೂ
ಅಣಕಿಸುತ್ತದೆ ಎದುರು ನಿಂತ ವಾಸ್ತವ ಸ್ಥಿತಿ

ನೆನಪು ಕಾಡಿ,
ಎದೆಯ ಬೇಗುದಿ ಇನ್ನೇನು
ಸಿಡಿಯಲು ಸಿದ್ಧವಾಗಿ
ನನ್ನ ಮೇಲಿನ ನಿಯಂತ್ರಣ
ನಾನೇ ಕಳೆದುಕೊಳ್ಳುವಂತಾದಾಗ
ಮೌನಕ್ಕೆ ಶರಣು ಹೋಗುತ್ತೇನೆ
ನಿಲ್ಲಿಸಿ ಮಾತು, ಫೋನು, ಮೆಸೆಜುಗಳನ್ನೆಲ್ಲ
ಕಳೆದು ಎರಡು ದಿನ,
ಅದರ ಮೇಲೆ ಮತ್ತೆರಡಾಗಿ
ವಾರಕ್ಕೆ ಹತ್ತಿರವಾದಾಗ
ತಹಂಬದಿಗೆ ಬರುತ್ತದೆ ನಿಧಾನವಾಗಿ
ಕ್ಷೋಬೆಗೊಂಡ ಮನಸು

ಭಾವನೆಗಳು ಮರುಗಟ್ಟಿದ ನಂತರ
ಏನೆಂದರೆ ಏನೂ ಆಗದಂತೆ
ಲೋಕಾಭಿರಾಮವಾಗಿ ಪರಿಚಿತನೊಬ್ಬನ ಬಳಿ
ಹರಟಿದಂತೆ ಮಾತನಾಡುತ್ತ
ಒಳಗೊಳಗೇ ಮರುಗುತ್ತೇನೆ
ಎಂದೂ ಸರಿಹೋಗದ
ಹಿಂದೊಮ್ಮೆ ಸ್ವರ್ಗಕ್ಕೆ ಕಿಚ್ಚಿಟ್ಟ ಸಂಬಂಧಕ್ಕಾಗಿ

‍ಲೇಖಕರು Admin

August 6, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: