ಶಿವಯೋಗಿ ಕಳ್ಳಿಮಠ ಕವಿತೆ- ವಿದಾಯ…

ಶಿವಯೋಗಿ ಕಳ್ಳಿಮಠ

ಹೋಗುವುದೆಂದರೆ
ಕೈ ಬಿಸಿ ಹೋದಷ್ಟೇನು ಸುಲಭವಲ್ಲ..

ಉಸಿರಿನ ಗಾಳಿ ದಸಕ್ಕೆಂದು ನಿಂತಂತೆ.
ನೆನಪು ಉಕ್ಕಿ
ನೋವು ಉಮ್ಮಳಿಸಿ
ನೆಲದಾದರ ತಪ್ಪಿ ದಂತೆ
ಕಳವಳ.
ಬಾಂಡಲಿಯಲ್ಲಿ ಮನಸು.
ಜಾತ್ರೆಯಲಿ ಅಮ್ಮನ ಕೈ ತಪ್ಪಿ,
ದುರಂತ ಕೂಸು.

ಒದ್ದೆ ಕಣ್ಣ ಹಿಂದೆ ಬೇಯುತ್ತಿದೆ ಜೀವ.
ಆಪ್ತ ಆಸರೆ ಕಳಕೊಂಡ ಅನಾಥ ಭಾವ.
ಕಾಲ ಸ್ತಬ್ಧಗೊಂಡು,
ನಿಗಿನಿಗಿ ಕೆಂಡದ ಜೀವನ ಪ್ರೀತಿ
ಕಡಿಮೆಯಾಗಿ.ಓಕುಳಿಯ
ಉತ್ಸಾಹವಿನ್ನು ಸವಕಳಿಯ ಸರಕು.
ಇಲ್ಲಿಯ ಮಳೆ, ಗಾಳಿ, ಮಣ್ಣು
ಮರ ಹುಲ್ಲು ಹಸಿರಿಗಿನ್ನು ನಾನು ಅನಾಮಿಕ.
ನನ್ನದೆಂದು ಬಿಗುತ್ತಿದ್ದ ಎಲ್ಲದರಿಂದ ನಾನು
ಅಪರಿಚಿತ.
ಬೆನ್ನ ತಿರುಗಿಸಿ ಮುನ್ನೆಡೆದರು
ಹಿಂದೆ ನೋಡುತಿದೆ ಮನಸು.

ಆಗಬಹುದು ಸಾಗರ ಸಂಗಮ
ಮರೆಯಲಾದೀತೆ ನದಿಗೆ ಉಗಮ.
ಇದೆಲ್ಲ ಬಿಟ್ಟು ಮೊದಲನಂತಾಗಲಿ‌
ಎಂದು ಕೊರಗುತ್ತಿದ್ದೇನೆ.
ಹು ಇಲ್ಲಿಂದಾಚೆ ಜೀವನ ಏನೋ?

‍ಲೇಖಕರು Admin

June 26, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

4 ಪ್ರತಿಕ್ರಿಯೆಗಳು

  1. Nitish

    ಬಹುಶಃ ನಾವು ಒಬ್ಬರೇ ಆಗುತ್ತೇವೆ ಸರ್

    ಪ್ರತಿಕ್ರಿಯೆ
  2. Nitish

    ನಿಮ್ಮ ಕವಿತೆ ಯಲ್ಲಿ ದುಃಖದಲ್ಲಿ ಇರುವ ಮನುಷ್ಯ ನಾ ಒಂದು ಭಾಗ ಕಾಣಸುತ್ತದೆ.
    (ಕವಿತೆ ಸುಂದರವಾಗಿದೆ ಸರ್)❤️

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: