ವೈಶಾಲಿ ಹೆಗಡೆಯವರ ಎರಡು ಕವನಗಳು

ವೈಶಾಲಿ ಹೆಗಡೆ

ಮಾತು
 
ನೋವಾಗಲು ಹರಿತ ಆಯುಧವೇ ಬೇಕೆಂದಿಲ್ಲ
ನುರಿತ ನಾಲಿಗೆಯೂ ಸಾಕು
ನುಡಿಯಲೇಬೇಕೆಂದಿಲ್ಲ.
ಕೊರೆದು ಹರಿದ ರುಧಿರದ ಬಣ್ಣ ಮಾತ್ರವೇ ಕೆಂಪಲ್ಲ
ಕಣ್ಣೋಟ ಹಿಂಡಿತೆಗೆದ ನೋವಿಗೂ ಬಣ್ಣವಿದ್ದೀತು ನೋಡು
ಹುಡುಕುತ್ತಿದ್ದೇನೆ
ಲಕ್ಷ ನಾಲಗೆಗಳ ಲೋಕದಲ್ಲಿ
ಅಕ್ಷರ ಅಲಕ್ಷವಾಗಿ ಮೊರೆವ ಮೇಳದಲ್ಲಿ
ಒಂದು ಮಾತು
ಮಾತೆನಿಸಿಕೊಳ್ಳಲು ಅರ್ಹವಿರುವ ಒಂದೇ ಒಂದು ಮಾತು

ಶಿಲಾಮುಖಿ*
 
ಕೆಂಗಣ್ಣ ಉರಿ ಶಾಪಕ್ಕೆ ಶಿಲೆಯಾಗಿಬಿಡಲು ನಾನೇನು
ಅಹಲ್ಯೆಯಲ್ಲ
ಮುದದ ಮಡದಿಯ ಮನವ ಶಿಲೆಯಾಗಿಸುವ ರಾಮನ
ಕಾಯುವ ಕರ್ಮವೂ ಬೇಕಿಲ್ಲ
ಅರಳುವ ಮುಂಚೆ ಹೇಳಿಬಿಡುವೆ ಕೇಳು
ಗುರುತು ಸಿಗದೇ ಹೋದೀತು
ಬಿರುಬಿಸಿಲಲಿ ಭರದಿ ಬೆಳೆವ ಶಿಲಾಮುಖಿ ನಾನು
 
* ಶಿಲಾಮುಖಿ ಅಥವಾ ಲಿತೊಪ್ಸ್ ಎನ್ನುವುದು ದಕ್ಷಿಣ ಆಫ್ರಿಕಾದ ಅತ್ಯಂತ ಒಣಹವೆ ಹಾಗೂ ಬಿಸಿಲಲ್ಲಿ ಬೆಳೆವ ಸಸ್ಯ. ಕಲ್ಲಿನಂತೆ ಕಾಣುವ ಈ ಪುಟ್ಟ ಗಿಡದಲ್ಲಿ ಅಂದದ ಬಿಳಿಹೂಗಳು ಬಿಡುತ್ತವೆ.
 

‍ಲೇಖಕರು G

May 15, 2014

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

9 ಪ್ರತಿಕ್ರಿಯೆಗಳು

  1. Shwetha Hosabale

    ಎರಡೂ ಕವನಗಳೂ ತುಂಬಾ ಹಿಡಿಸಿದವು 🙂

    ಪ್ರತಿಕ್ರಿಯೆ
  2. Krishnamurthy Kunjoor

    ಕವನಗಳೆರಡೂ ಚೆನ್ನಾಗಿವೆ.ಅಭಿನಂದನೆಗಳು.

    ಪ್ರತಿಕ್ರಿಯೆ
  3. ಪ್ರಕಾಶ ಬಿ. ಜಾಲಹಳ್ಳಿ

    ನಿಮ್ಮ ಕವಿತೆಯ ಸಾಲುಗಳು ತುಂಬಾ ಚೆನ್ನಾಗಿವೆ. ಅದರಲ್ಲೂ ಈ ಸಾಲು ತುಂಬಾ ಶಕ್ತವಾಗಿದೆ ಅನಿಸತು.
    “ಕೊರೆದು ಹರಿದ ರುಧಿರದ ಬಣ್ಣ ಮಾತ್ರವೇ ಕೆಂಪಲ್ಲ
    ಕಣ್ಣೋಟ ಹಿಂಡಿತೆಗೆದ ನೋವಿಗೂ ಬಣ್ಣವಿದ್ದೀತು ನೋಡು”

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: