ವೀರೇಂದ್ರ ರಾವಿಹಾಳ್ ಕವಿತೆ- ಒಂದು ಅನನ್ಯ ಭೇಟಿ…

ವೀರೇಂದ್ರ ರಾವಿಹಾಳ್ 

ಬಹು ದೀರ್ಘ ಕಾಲದ ನಂತರ
ಒಂದು ಆಕಸ್ಮಿಕ ದಿನ
ಆಕಸ್ಮಿಕವಾಗಿಯೇ
ಭೇಟಿಯಾದೆವು

ಮುಖದಲ್ಲಿ ಕಿರುನಗೆಯ
ಬೆಳುದಿಂಗಳು

ಎದೆಯ ತುಂಬೆಲ್ಲ
ಹಳೆಯ ಭಾವಗಳ
ಸುಳಿಗಾಳಿ

ಮಾತುಗಳೆಲ್ಲ ಹರಿವ
ನದಿಯಾಗಲೆಂದು
ಧುಮಿಕ್ಕುವ
ಜಲಪಾತಗಳಾಗಲೆಂದು

ಇಷ್ಟು ದಿನ ತಡೆದ ಮಳೆ
ಹಳೆಯ ಕೊಳೆಯನೆಲ್ಲ
ಕೊಚ್ಚಿ ಹೋಗಲೆಂದು

ದುಗುಡವನೊತ್ತ ಮನ
ಹಗುರಾಗಲೆಂದು…
ಹೀಗೆ
ಒಂದು ಏಕಾಂತದಲ್ಲಿ…

ಕೇವಲ
ಮಾತಿಗಾಗಿ ಹಂಬಲಿಸಿ
ಕೂತಿದ್ದೆವು.
ಏನೊಂದೂ ಮಾತಿಲ್ಲ! ಬರೀ ಮೌನ…
ಆದರೂ
ಮಾತಿನ ಹಸಿವು ನೀಗಿತ್ತು!

ಸೂರ್ಯ ತನ್ನಷ್ಟಕ್ಕೇ ತಾನು
ಬಂದು ಹೋದ
ಇನ್ನೇನು ಚಂದಿರ
ಬರುವ ಸರದಿ

ಮೆಲ್ಲಗೆ
ಮಬ್ಬು ಜಾರುತ್ತಿತ್ತು

ಹಕ್ಕಿಗಳು ಚಿಟ್ಟೆಗಳು
ಗೂಡು ಸೇರುವ ಹೊತ್ತು

ಸಂತೃಪ್ತ ಭಾವ
ಹೊತ್ತು ಹೊರಡುವ
ವೇಳೆ…

ಇಬ್ಬರ ಕಂಗಳಲ್ಲೂ
ಸಾವಿರತಾರೆಗಳ ಹೊಳಪು!

ಮನದ ದುಗುಡ ನೀಗಿ
ಎದೆಯಲ್ಲೀಗ ನಿರಾಳ!

‍ಲೇಖಕರು Admin

October 28, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: