ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ವೀರೇಂದ್ರ ರಾವಿಹಾಳ್ ಕವಿತೆ- ಒಂದು ಅನನ್ಯ ಭೇಟಿ…

ವೀರೇಂದ್ರ ರಾವಿಹಾಳ್ 

ಬಹು ದೀರ್ಘ ಕಾಲದ ನಂತರ
ಒಂದು ಆಕಸ್ಮಿಕ ದಿನ
ಆಕಸ್ಮಿಕವಾಗಿಯೇ
ಭೇಟಿಯಾದೆವು

ಮುಖದಲ್ಲಿ ಕಿರುನಗೆಯ
ಬೆಳುದಿಂಗಳು

ಎದೆಯ ತುಂಬೆಲ್ಲ
ಹಳೆಯ ಭಾವಗಳ
ಸುಳಿಗಾಳಿ

ಮಾತುಗಳೆಲ್ಲ ಹರಿವ
ನದಿಯಾಗಲೆಂದು
ಧುಮಿಕ್ಕುವ
ಜಲಪಾತಗಳಾಗಲೆಂದು

ಇಷ್ಟು ದಿನ ತಡೆದ ಮಳೆ
ಹಳೆಯ ಕೊಳೆಯನೆಲ್ಲ
ಕೊಚ್ಚಿ ಹೋಗಲೆಂದು

ದುಗುಡವನೊತ್ತ ಮನ
ಹಗುರಾಗಲೆಂದು…
ಹೀಗೆ
ಒಂದು ಏಕಾಂತದಲ್ಲಿ…

ಕೇವಲ
ಮಾತಿಗಾಗಿ ಹಂಬಲಿಸಿ
ಕೂತಿದ್ದೆವು.
ಏನೊಂದೂ ಮಾತಿಲ್ಲ! ಬರೀ ಮೌನ…
ಆದರೂ
ಮಾತಿನ ಹಸಿವು ನೀಗಿತ್ತು!

ಸೂರ್ಯ ತನ್ನಷ್ಟಕ್ಕೇ ತಾನು
ಬಂದು ಹೋದ
ಇನ್ನೇನು ಚಂದಿರ
ಬರುವ ಸರದಿ

ಮೆಲ್ಲಗೆ
ಮಬ್ಬು ಜಾರುತ್ತಿತ್ತು

ಹಕ್ಕಿಗಳು ಚಿಟ್ಟೆಗಳು
ಗೂಡು ಸೇರುವ ಹೊತ್ತು

ಸಂತೃಪ್ತ ಭಾವ
ಹೊತ್ತು ಹೊರಡುವ
ವೇಳೆ…

ಇಬ್ಬರ ಕಂಗಳಲ್ಲೂ
ಸಾವಿರತಾರೆಗಳ ಹೊಳಪು!

ಮನದ ದುಗುಡ ನೀಗಿ
ಎದೆಯಲ್ಲೀಗ ನಿರಾಳ!

‍ಲೇಖಕರು Admin

28 October, 2021

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading