ಡಾ ಲೋಕೇಶ್ ಮೊಸಳೆ
‘ವಿಶ್ವ ಆನೆ ದಿನ’ ಇಂದು. ಆನೆ-ಮಾನವನ ಒಡನಾಟ ಮನುಷ್ಯ ಜೀವಿಯ ಹುಟ್ಟಿನಿಂದಲೇ ಜೊತೆ ಜೊತೆಗೆ ಇದ್ದರೂ ಇತ್ತೀಚಿನ ದಿನಗಳಲ್ಲಿ ಮನುಷ್ಯನ ಆಶೆ ಬುರುಕುತನದ ಜೀವನ ಶೈಲಿಯಿಂದಾಗಿ ಆನೆ ಮಾನವನ ನಡುವಿನ ಸಂಘರ್ಷದಲ್ಲಿ ಆನೆಗಳ ಬದುಕು ನರಕ ಯಾತನೆಯಲ್ಲಿ ನಲುಗುತ್ತಿವೆ.
ಸಂಘ ಜೀವಿಯಾದ ಆನೆಗಳು ನಮ್ಮ ಕಲೆ ಸಂಸ್ಕೃತಿ ಪುರಾಣ ಜಾನಪದ ದಲ್ಲಿ ಮಿಳಿತವಾಗಿ ತನ್ನದೇ ಮಹತ್ತ್ವವನ್ನು ಹೊಂದಿದೆ. ಆನೆ ಕದ್ದರೂ ಕಳ್ಳ; ಅಡಿಕೆ ಕದ್ದರೂ ಕಳ್ಳ. ಇದು ಜನಪದರ ಗಾದೆ ಮಾತು. ಇಂದು ವನ್ಯ ಸಂಪತ್ತು ಜೀವಜಾಲ ಒಳ್ಳೆ ಗಾಳಿ, ಬೆಳಕು, ನೀರು, ಕಾಡು, ನದಿ, ಪರ್ವತ, ಸಮುದ್ರ, ಕಲ್ಲುಬಂಡೆಗಳನ್ನು ಉಳಿಸಿ ನಮ್ಮದೇ ಮೊಮ್ಮಕ್ಕಳಿಗೆ ಬಿಟ್ಟು ಹೋಗ ಬೇಕಾದ ಹೊಣೆಗಾರಿಕೆ ಯನ್ನು ನೆನಪಿಸಲು ಹುಲಿ ದಿನ, ಆನೆ ದಿನ, ವನ್ಯಜೀವಿ ಸಪ್ತಾಹ, ಭೂಮಿ ದಿನ, ಜಲ ದಿನ……. ಹೀಗೆ ಹತ್ತಾರು ದಿನಗಳನ್ನು ಗುರುತಿಸಿಕೊಂಡಿರುವುದು ಉಳಿಸಿ ಬೆಳೆಸಿ ಕಾಪಾಡಬೇಕಾದ ಹೊಣೆಗಾರಿಕೆಯನ್ನು ನೆನಪಿಸಿ ಕೊಳ್ಳುವುದಕ್ಕಾಗಿ….. ನಮ್ಮ ಭೂಮಿ ಆಕಾಶ ಗಾಳಿ ನೀರು ಹಿರಿಯರು ಬಿಟ್ಟು ಹೋಗಿರುವ ಕಲೆ ಸಂಸ್ಕೃತಿ ಜೀವಜಾಲಗಳ ಬಗ್ಗೆ ಪ್ರೀತಿ ತುಂಬಿದ ಬದುಕು ನಮ್ಮದಾಗಲಿ, ನಾವೂ ಬದುಕಿ; ಬದುಕಲೂ ಬಿಡೋಣ. ಈ ಬುದ್ಧನ ಮಾತುಗಳಿಗೆ ಧ್ವನಿ ಯಾಗೋಣ.
Amazing clicks
ಆನೆಗಳ ಲೋಕದ ಬೆರಗಿನ ಛಾಯಾಚಿತ್ರಗಳು ಸೊಗಸಾಗಿವೆ. ಈ ಚಿತ್ರಗಳನ್ನು ಸೆರೆಹಿಡಿಯಲು ನಡೆಸಿದ ತಯ್ಯಾರಿ, ಎಚ್ಚರಿಕೆ, ಎದುರಾದ ಅಪಾಯಗಳು, ಚಿತ್ರ ಸಿಕ್ಕಾಗ ಆದ ರೋಮಾಂಚನ ಕುರಿತು ಬರೆಯುವ ಯತ್ನ ಮಾಡು ಲೋಕೇಶ್.